ಔಷಧಿ ಕಂಡು ಹಿಡಿಯುವಲ್ಲಿ ಸರ್ಕಾರವೇ ಫೇಲ್
ತೀರ್ಥಹಳ್ಳಿ ಹೊನ್ನೇಕೇರಿ ಗ್ರಾಮದ ಸಸಿತೋಟ ಗ್ರಾಮದ ಕೃಷಿ ಕಾರ್ಮಿಕ ಕಿಶೋರ್ (29) ಮಂಗನ ಕಾಯಿಲೆಗೆ ಬುಧವಾರ ಮುಂಜಾನೆ ಬಲಿಯಾಗಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು.
ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ತೀವ್ರ ಸ್ವರೂಪದಲ್ಲಿ ಭಾಧಿಸುತ್ತಿದ್ದರು ಹಲವಯ ವರ್ಷದಿಂದ ಔಷಧಿ ಕಂಡು ಹಿಡಿಯುವಲ್ಲಿ ಸರ್ಕಾರಗಳು ವಿಫಲವಾಗುತ್ತಿದೆ. ಬೇಸಿಗೆಯಲ್ಲಿ ಮಾತ್ರ ರೋಗಬಾಧೆ ಹೆಚ್ಚಳವಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ಸರ್ಕಾರಗಳು ಮಂಗನಕಾಯಿಲೆ ವಿಷಯದಲ್ಲಿ ನಿರಾಳತೆ ವಹಿಸುತ್ತಿದೆ. ರೋಗ ಲಕ್ಷಣಗಳು ರೂಪಾಂತರ ಆಗುತ್ತಿದ್ದು ವೈದ್ಯಕೀಯ ವ್ಯವಸ್ಥೆಯೆ ಈ ಬಗ್ಗೆ ಔಷಧಿ ಕಂಡುಹಿಡಿಯದ ಸ್ಥಿತಿಯಲ್ಲಿದೆ. ಖಾಸಗಿ ಕಂಪನಿಗಳಿಗೆ ಮಲೆನಾಡು ಭಾಗ ಅತ್ಯಂತ ಚಿಕ್ಕ ಪ್ರದೇಶವಾಗಿ ಕಾಣಿಸಿಕೊಳ್ಳುತ್ತದೆ. ಮಂಗನಕಾಯಿಲೆ ಸಾವು ಬೆರಳೆಣಿಕೆಯಾಗಿ ಗುರುತಿಸುತ್ತಾರೆ. ಈ ಬಗ್ಗೆ ಸಂಶೋಧನೆ ನಡೆಸಿದರೆ ಸಂಶೋಧನೆ ಹಿಂದೆ ಕೋಟ್ಯಾಂತರ ರೂಪಾಯಿ ಲಾಭ ಸಿಗಲಾರದು. ಸರ್ಕಾರ ಕೆಲವು ಕಣ್ಣಿಗೆ ಕಾಣಿಸುವ ಕ್ರಮಗಳನ್ನು ತೋರಿಸಿ ಜನರ ಬಾಯಿ ಮುಚ್ಚಿಸುತ್ತಾರೆ. ಆದರೆ ಮಲೆನಾಡು ಭಾಗದ ಜನರಿಗೆ ಮಾತ್ರ ತಮ್ಮವರ ಕಳೆದುಕೊಂಡ ನೋವು ಭಾಧಿಸುತ್ತಿರುವಂತೆ ಸರ್ಕಾರವೇ ವ್ಯವಸ್ಥೆ ಸೃಷ್ಟಿಸುತ್ತಿರುವುದು ವಿಷಾಧದ ಸಂಗತಿಯಂತಿದೆ.