ಪ್ರಗತಿಪರ ಚಿಂತಕ, ಕವಿ, ಲೇಖಕ ಟೆಲಕ್ಸ್ ರವಿಕುಮಾರ್ ಮತ್ತು ಸಮಾನ ಮನಸ್ಕರ ಅವಿರತ ಪ್ರಯತ್ನ..

ಮರ್ಯಾದೆ ಗೇಡು ಹತ್ಯೆ ವಿರುದ್ಧ ಕಾನೂನು ರಚನೆಗೆ ಸರ್ಕಾರ ನಿರ್ಧಾರ..?

ಡಿ.21 ರಂದು ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ  ನಡೆದ  ದಲಿತ ಹುಡುಗನನ್ನು  ಪ್ರೀತಿಸಿ ಮದುವೆಯಾದ ಲಿಂಗಾಯಿತ ಸಮುದಾಯದ ಮಾನ್ಯಾಳನ್ನು ಆಕೆಯ ತಂದೆಯೇ ಕೊಂದು "ಮರ್ಯಾದಾಗೇಡು ಹತ್ಯೆ" ನಡೆಸಿದ್ದ. ಮನುಷ್ಯರು ಬೆಚ್ಚಿ ಬೀಳುವ ಈ ಅಮಾನವೀಯ ಕೃತ್ಯದ ಮೊದಲು ದನಿಯೆತ್ತಿದ ಪತ್ರಕರ್ತ ಕವಿ ಲೇಖಕ, ಟೆಲೆಕ್ಸ್ ರವಿಕುಮಾರ್ ಸಾಮಾಜಿಕ ಜಾಲ ತಾಣದಲ್ಲಿ ಕೃತ್ಯವನ್ನು ಖಂಡಿಸಿ ಬರೆದಾಗ ಮಾನವೀಯ ಮನಸುಗಳು ಮರುಗಿದ್ದವು. ಅಷ್ಟಕ್ಕೇ ಸುಮ್ಮನಾಗದ ರವಿಕುಮಾರ್ ಇದಕ್ಕೆ ಅಭಿಯಾನದ ಸ್ವರೂಪ ನೀಡಿದಾಗ ಸಾವಿರಾರು ಮಾನವೀಯ ಕಳಕಳಿ ಇರುವ ಪ್ರಗತಿಪರರು, ಲೇಖ ಕರು ಜೊತೆಯಾಗಿದ್ದರು.

ರಾಜ್ಯದಲ್ಲಿ ಮತ್ತೆ ಮತ್ತೆ ಇಂತಹ "ಮರ್ಯಾದಾಗೇಡು ಹತ್ಯೆಗಳು" ನಡೆಯುತ್ತಲೇ ಇವೆ. ಇವುಗಳನ್ನು ನಿಗ್ರಹಿಸಲು ಕಠಿಣವಾದ ಪ್ರತ್ಯೇಕ ಕಾಯ್ದೆ ಜಾರಿಯಾಗಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರವನ್ನೂ ಬರೆಯಲಾಗಿತ್ತು. FB & ವಾಟ್ಸಾಪ್ ವೇದಿಕೆಗಳಲ್ಲಿ " ಮಾನ್ಯ ಕಾಯ್ದೆ" ಅಭಿಯಾನ ನಡೆಸಲಾಗಿತ್ತು. ಅಭಿಯಾನಕ್ಕೆ ಸಮ್ಮತಿಸಿದವರ ಹೆಸರುಗಳುಳ್ಳ ಮನವಿ ಪತ್ರವನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು. 

ಮನವಿ ಪತ್ರದೊಂದಿಗೆ ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಮರ್ಯಾದಾಗೇಡು ಹತ್ಯೆಗಳು ವಿವರಗಳ ದಾಖಲೆಗಳನ್ನು ಲಗತ್ತಿಸಿದ ಫೈಲ್ ನ್ನೇ ನೀಡಿ ಮರ್ಯಾದಾಗೇಡು ಹತ್ಯೆಗೆ ಪ್ರತ್ಯೇಕ ಕಾಯ್ದೆ ಅಗತ್ಯತೆ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಲಾಗಿತ್ತು.

ಮರ್ಯಾದಾಗೇಡು ಹತ್ಯೆ  ಹತ್ತಿಕ್ಕಲು  ಪ್ರತ್ಯೇಕ ಕಾನೂನು ತರುವುದಾಗಿ ಅತ್ಯಂತ ಸಹನೆ ಮತ್ತು ಗಂಭೀರವಾಗಿ ಆಲಿಸಿದ  ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಕಾಯ್ದೆ ತರೋಣ  ಎಂದು ಪುನರುಚ್ಚರಿಸಿದ್ದಾರೆ.ಈಗಾಗಲೇ ಕಾಯ್ದೆ ಸ್ವರೂಪದ ಕುರಿತು ಚರ್ಚೆ ರೂಪು ರೇಷೆ ಸಿದ್ದವಾಗುತ್ತಿದ್ದು ಶೀಘ್ರವೇ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post