ಸಂಘ ಪರಿವಾರದ ರಾಷ್ಟ್ರೀಯ ಮುಖಂಡರಾಗಿದ್ದ ಚಕ್ಕೋಡಬೈಲು ಬೆನಕಭಟ್ ಪತ್ನಿ ವಿಶಾಲಾಕ್ಷಮ್ಮ ನಿಧನ

ಬಿಜೆಪಿ ಪಕ್ಷವನ್ನು ಆರಂಭಿಕ ಹಂತದಲ್ಲಿ ಕಡು ಕಷ್ಟದಲ್ಲಿ ಬೆಳೆಸಲು ಶ್ರಮ ಪಟ್ಟವರಲ್ಲಿ ಒಬ್ಬರು, ಸಂಘ ಪರಿವಾರದ ರಾಷ್ಟ್ರೀಯ ಮುಖಂಡರಾಗಿದ್ದ ದಿ.ಚಕ್ಕೋಡಬೈಲು ಬೆನಕ ಭಟ್ಟರ ಧರ್ಮಪತ್ನಿ ವಿಶಾಲಾಕ್ಷಮ್ಮ (90) ನಿಧನರಾಗಿದ್ದಾರೆ. ವಿಶಾಲಾಕ್ಷಮ್ಮ ಮೂಲತಃ ಕೇರಳ ಗಡಿನಾಡು ಕಾಸರಗೋಡು ಸಮೀಪದವರು. ಅವರಿಗೆ ಮೂರು ಗಂಡು, ಎರಡು ಹೆಣ್ಣು ಮಕ್ಕಳು ಇದ್ದಾರೆ.

ಚಕ್ಕೋಡಬೈಲು ಬೆನಕಭಟ್‌, ತಾರೊಗೊಳ್ಳಿ ನಾಗರಾಜ ರಾಯ, ಕುರುವಳ್ಳಿ ಕೆ.ನರಸಿಂಹ ನಾಯಕ್‌ ಇವರುಗಳ ಅವಿರತ ಪರಿಶ್ರಮದಿಂದ 80ರ ದಶಕದ ಆರಂಭದಲ್ಲಿ ಅಂಬೆಗಾಲಿಟ್ಟ ಬಿಜೆಪಿ ಬಳಿಕ ನಿದಾನಕ್ಕೆ ತೀರ್ಥಹಳ್ಳಿಯಲ್ಲಿ ಪ್ರಬಲ ಪ್ರತಿಪಕ್ಷಗಳಾದ ಕಾಂಗ್ರೆಸ್‌, ಜನತಾದಳ, ರೈತ ಸಂಘದ ನಡುವೆ ತನ್ನ ಅಸ್ಥಿತ್ವ ರೂಪಿಸಿಕೊಂಡಿತ್ತು. ಅಲ್ಲದೇ ರಾಜಕೀಯವಾಗಿ ಈ ಮೂವರ ಅತ್ಯುತ್ತಮ ಕೊಡುಗೆ ಈಗಿನ ಶಾಸಕ ಆರಗ ಜ್ಞಾನೇಂದ್ರ.

ಆರ್ಥಿಕವಾಗಿ ಅತ್ಯಂತ ಸಂಕಷ್ಟದ ದಿನಗಳಲ್ಲಿ ಚಕ್ಕೋಡಬೈಲು ಬೆನಕ ಭಟ್‌ ಪಕ್ಷ ಸಂಘಟನೆ ಎಂದು ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರವನ್ನು ಸುತ್ತುತ್ತಿದ್ದಾಗ ಕೌಟುಂಬಿಕವಾಗಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ಪತ್ನಿ ವಿಶಾಲಾಕ್ಷಮ್ಮ. ಕುಟುಂಬದ ಜೊತೆಗೆ ಪಕ್ಷದ ಕಾರ್ಯಕರ್ತರನ್ನು ಕೂಡ ಕುಟುಂಬದವರಂತೆ ನೋಡಿಕೊಂಡು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನಕ್ಕೆ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post