ಬಟ್ಟೆ ಹರಿದ ಸಿಬ್ಬಂದಿಯ
ಮೇಲೆ ಕ್ರಮ ಕೈಗೊಳ್ಳಿ
ಸೋಷಿಯಲ್ ಮೀಡಿಯಾದಲ್ಲಿ
ಫೋಟೋ ಹಿಡಿದು ಅಪಹಾಸ್ಯ ಮಾಡುವವರ ವಿರುದ್ಧ ಕೇಸ್ ದಾಖಲಿಸಿ
ಕರ್ನಾಟಕ ವಿಧಾನಸಭೆಯ
ವಿಶೇಷ ಅಧಿವೇಶನದ ವೇಳೆ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಅವರನ್ನು ಎಳೆದಾಡಿ ಬಟ್ಟೆ
ಹರಿದು ಹಾಕಿರುವ ಘಟನೆ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಡೆದ ನೇರ ದಾಳಿ ಎಂದು ಶಿವಮೊಗ್ಗ ಜಿಲ್ಲಾ
ಪಂಚಾಯತ್ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಲ್. ಸುಂದರೇಶ್ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ
ಪ್ರಕಟಣೆ ನೀಡಿರುವ ಅವರು ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ, ಕರ್ನಾಟಕ ವಿಧಾನ ಪರಿಷತ್ನ ವಿಪಕ್ಷ
ನಾಯಕರಾಗಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ಘ ಕಾಲ ಕಾರ್ಯನಿರ್ವಹಿಸಿ ದೇಶದ ಜನಪರ
ರಾಜಕೀಯಕ್ಕೆ 5 ದಶಕಗಳ ಸೇವೆ ಸಲ್ಲಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ರ ಮೇಲೆ
ನಡೆದ ದಾಳಿ ಘಟನೆ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿತನದ್ದು.
ಹಿಂದುಳಿದ ವರ್ಗ
ಹಾಗೂ ಶೋಷಿತ ಸಮುದಾಯಗಳ ಧ್ವನಿಯಾಗಿ, ಸಂವಿಧಾನಾತ್ಮಕ ಮೌಲ್ಯಗಳನ್ನು ಪ್ರತಿನಿಧಿಸುವಂತಹ ಹಿರಿಯ ನಾಯಕನ
ಬಟ್ಟೆಯನ್ನು ಹರಿದಿರುವುದು ಕೇವಲ ವ್ಯಕ್ತಿಯ ಮೇಲಿನ ದೌರ್ಜನ್ಯವಲ್ಲ ಇದು ಪ್ರಜಾಪ್ರಭುತ್ವ, ಜನಪ್ರತಿನಿಧಿಗಳ
ಗೌರವ ಮತ್ತು ಸಂವಿಧಾನಾತ್ಮಕ ಸ್ಥಾನಗಳ ಮೇಲೆಯೇ ನಡೆದ ದಾಳಿ. ಈ ಘಟನೆ ಕರ್ನಾಟಕ ರಾಜ್ಯಪಾಲರ ಭದ್ರತಾ
ಸಿಬ್ಬಂದಿಯಿಂದ ನಡೆದಿರುವುದು ಅತ್ಯಂತ ಗಂಭೀರ ವಿಚಾರ. ರಾಜ್ಯಪಾಲರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ,
ತಪ್ಪಿತಸ್ಥ ಭದ್ರತಾ ಸಿಬ್ಬಂದಿಯ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು.
ಶೋಷಿತ ಸಮುದಾಯಗಳ
ನಾಯಕರಿಗೆ ನ್ಯಾಯ ದೊರಕಲೇಬೇಕು. ಈ ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಮನುವಾದಿಗಳು ಬಿ.ಕೆ. ಹರಿಪ್ರಸಾದರ
ಹರಿದ ಬಟ್ಟೆಯನ್ನು ತೋರಿಸಿ ಅಪಹಾಸ್ಯ ಮಾಡಿ ಅವಮಾನಿಸಿದ್ದು ಪೋಸ್ಟ್ ಮಾಡಿದವರ ವಿರುದ್ಧ ಪೊಲೀಸರು
ಸ್ವತಹ ದೂರು ದಾಖಲಿಸಿ ಸದ್ರಿಯವರ ವಿರುದ್ಧ ಪ್ರಕರಣ ದಾಖಲಿಸಬೇಕು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು,
ತೀರ್ಥಹಳ್ಳಿ ಆರ್ಯ ಈಡಿಗರ ಸಂಘದ ನಿರ್ದೇಶಕರಾದ ಟಿ.ಎಲ್ ಸುಂದರೇಶ್ ಒತ್ತಾಯಿಸಿದ್ದಾರೆ.
