ಯುವ ಸಮುದಾಯದ ಆತ್ಮ ವಿಶ್ವಾಸದ ಕೊರತೆ ಬಿಂಬಿಸುವ ವಸಂತನ ಅನಿರೀಕ್ಷಿತ ಸಾವು..
ಕುರುವಳ್ಳಿ ಭಾಗದ
ಅತ್ಯಂತ ಸುಶಿಕ್ಷಿತ ಕುಟುಂಬಗಳಲ್ಲಿ ಒಂದೆಂಬ ಗೌರವ ಹೊಂದಿರುವ ರೇಣುಕಾಂಬಾ ಟ್ರಾನ್ಸಫೋರ್ಟ್ ಲಾರಿಗಳು
ಹಾಗೂ ಕಲ್ಲು ವ್ಯಾಪಾರೋದ್ಯಮಿ ಕುಟುಂಬದ ವಸಂತ (35) ಹುಣಸವಳ್ಳಿ ಗ್ರಾಮದ ಅವರ ಕೃಷಿ ಭೂಮಿಯ ಸಮೀಪದ
ತುಂಗಾನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಮಾರು 50 ವರ್ಷಕ್ಕೂ ಹಿಂದಿನಿಂದ ಕಲ್ಲು ವ್ಯಾಪಾರ
ಮಾಡಿಕೊಂಡು ಬಂದಿರುವ, ಅತ್ಯಂತ ಪರಿಶ್ರಮದಿಂದ ಆರ್ಥಿಕವಾಗಿ ಮೇಲೆ ಬಂದ ಕುಟುಂಬದ ಸದಸ್ಯ ವಸಂತ.
ವಸಂತನ ತಂದೆ ಮಂಜುನಾಥ್
ಕೆಲವು ವರ್ಷಗಳ ಹಿಂದೆ ಅಕಾಲಿಕ ಮರಣ ಹೊಂದಿದ್ದರು. ಈತನ ಚಿಕ್ಕಪ್ಪಂದಿರಾದ ಗಣಪತಿ, ನಾಗೇಂದ್ರ, ರೇಣುಕಾರಾಜ್
ತೀರ್ಥಹಳ್ಳಿಯಲ್ಲಿ ಬಹಳ ದೊಡ್ಡ ಸ್ನೇಹ ವಲಯವನ್ನು ಹೊಂದಿರುವವರು ಮತ್ತು ರಾಜಕೀಯವಾಗಿ ಪ್ರಭಾವಿಗಳು.
ಈತನ ಸೋದರತ್ತೆ ಲಕ್ಷ್ಮಿ
ವೆಂಕಟಪ್ಪ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿದ್ದವರು. ಈಗ ಚಿಕ್ಕಮ್ಮ ಮಂಜುಳಾ ನಾಗೇಂದ್ರ ಸದಸ್ಯರಾಗಿದ್ದಾರೆ.
ಇಷ್ಟೆಲ್ಲಾ ಹಿನ್ನಲೆ ಇದ್ದೂ ಈ ಯುವಕ ದುಡುಕಿ ಸಾವಿನ ಹಾದಿ ಹಿಡಿದಿದ್ದು ಅವರ ಕುಟುಂಬ ಹಾಗೂ ಆಪ್ತ
ವಲಯಕ್ಕೆ ಧಿಗ್ಬ್ರಮೆ ತಂದಿದೆ.
ಮನುಷ್ಯ ಅಂದ ಮೇಲೆ
ಸಮಸ್ಯೆ ಸಹಜ ಅದಕ್ಕೆ ಸಾವೇ ಪರಿಹಾರ ಅಂದು ಕೊಳ್ಳುವ ಈಗಿನ ಯುವ ಜನತೆ ಮನಸ್ಥಿತಿ ಗಾಬರಿ ಹುಟ್ಟಿಸುತ್ತಿದೆ.
ವಸಂತ ಪತ್ನಿ, ತಾಯಿ ಸೇರಿದಂತೆ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಶನಿವಾರ ಬೆಳಿಗ್ಗೆ ಮೃತರ ಅಂತ್ಯಕ್ರಿಯೆ
ನಡೆಯಲಿದೆ.
