ಕೋಣಂದೂರು ಮುರುಘರಾಜ್ ಗೆ ಪಿತೃ ವಿಯೋಗ
ಕಂದಾಯ ಇಲಾಖೆಯ ನಿವೃತ್ತ ನೌಕರರು ತಮ್ಮ ವೃತ್ತಿಯ ಅವಧಿಯಲ್ಲಿ ಜನಾನುರಾಗಿಯಾಗಿ ಕಾರ್ಯನಿರ್ವಹಿಸಿ ಪ್ರೀತಿಯ ರುದ್ರಣ್ಣರೆಂದು ಹೆಸರುಗಳಿಸಿದ್ದ ರುದ್ರಪ್ಪನವರು (85) ಮಂಗಳವಾರ ನಿಧನರಾದರು. ಜೋಗ, ತೀರ್ಥಹಳ್ಳಿ, ಹೊಸನಗರದಲ್ಲಿ ಕಾರ್ಯನಿರ್ವಹಿಸಿದ್ದರು. ಬಹು ಅಂಗಾಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇವರು ಪತ್ರಕರ್ತ ಕೋಣಂದೂರು ಮುರುಘರಾಜ್ ತಂದೆ.
ಮಡದಿ, ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗದವರನ್ನ ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಇನ್ನೊರ್ವ ಮಗ ಗಿರೀಶ್ ಕಾರ್ತಿಕೇ ಅವರ ಎನ್,ಆರ್,ಪುರದ ಜಮೀನಿನಲ್ಲಿ ಬುಧವಾರ ನಡೆಯಲಿದೆ.