ಪ್ರಚಂಡ ಜನಾಕರ್ಷಣೆ ಪಡೆದ “ಯುವ ಕೇಸರಿ”ಗಳ ಉಗ್ರ ನರಸಿಂಹ

ಸೆಲ್ಫಿ ಪಾಯಿಂಟ್‌ ಆಗಿ ಪರಿವರ್ತನೆಯಾದ ಕುವೆಂಪು ವೃತ್ತ

ತೀರ್ಥಹಳ್ಳಿಯ ಕುವೆಂಪು ವೃತ್ತದಲ್ಲಿ “ಯುವ ಕೇಸರಿ” ತಂಡದಿಂದ ಸ್ಥಾಪನೆಗೊಂಡಿದರುವ ಹಿರಣ್ಯಕಶ್ಯಪುವನ್ನು ಸಂಹರಿಸುತ್ತಿರುವ ಸ್ವಯಂ ಚಾಲಿತ ಬೃಹತ್‌ ಉಗ್ರ ನರಸಿಂಹ ಸ್ಥಬ್ದಚಿತ್ರ ಪ್ರಚಂಡ ಜನಾಕರ್ಷಣೆ ಪಡೆದಿದೆ. ಹೊರ ಊರುಗಳಿಂದ ತೀರ್ಥಹಳ್ಳಿಗೆ ಆಗಮಿಸುವ ಪ್ರವಾಸಿಗಳಿಗೆ ಈ ಸ್ಥಬ್ದಚಿತ್ರ ಸೂಜಿಗಲ್ಲಿನಿಂತೆ ಆಕರ್ಷಿಸುತ್ತಿದ್ದು ಮೊಬೈಲ್‌ಗಳಲ್ಲಿ ಇದರ ಚಿತ್ರಗಳನ್ನು ಕ್ಲಿಕ್ಕಿಸುವುದಲ್ಲದೇ ಸೆಲ್ಫಿಯನ್ನು ಕೂಡ ಪಡೆದುಕೊಂಡು ಮುಂದೆ ಹೋಗುತ್ತಿದ್ದಾರೆ.

ಭಜರಂಗದಳದ ತಾಲ್ಲೂಕು ಸಂಚಾಲಕ ಮತ್ತು ವಿಶ್ವಹಿಂದೂ ಪರಿಷತ್‌ ಕಾರ್ಯದರ್ಶಿಯಾಗಿರುವ ಗಣೇಶ್‌ ಪ್ರಸಾದ್‌ ದೇವಾಡಿಗ ನೇತೃತ್ವದ ಯುವಕರ ಗುಂಪು ಇದನ್ನು ಸಮಾನ ಮನಸ್ಕ ಸ್ನೇಹಿತರ ಆರ್ಥಿಕ ನೆರವಿನಿಂದ ತೀರ್ಥಹಳ್ಳಿ ದಸರಾ ವಿಶೇಷ ಆಕರ್ಷಣೆಯಾಗಿ ಸ್ಥಾಪಿಸಿದೆ. ಸಾರ್ವಜನಿಕರು ಅಥವಾ ದಸರಾ ಸಮಿತಿಯಿಂದ ಯಾವುದೇ ನೆರವನ್ನು ಪಡೆಯದೇ ಲಕ್ಷಾಂತರ ವೆಚ್ಚದ ಈ ಸ್ಥಬ್ದಚಿತ್ರವನ್ನು ಈ ಯುವಕರು ಸ್ಥಾಪಿಸುತ್ತಿರುವುದು ವಿಶೇಷವಾಗಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಇವರು ಸ್ಥಾಪಿಸಿದ್ದ ಬೃಹತ್‌ ಆಂಜನೇಯನ ಸ್ಥಬ್ದಚಿತ್ರವು ಕೂಡ ಅಪಾರ ಆಕರ್ಷಣೆ ಪಡೆದಿತ್ತು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post