ಆಲ್ ರೌಂಡ್ ಆಟದಿಂದ ಮಿಂಚಿದ ಯುವ ಪ್ರತಿಭೆ
ತೀರ್ಥಹಳ್ಳಿ ತಾಲ್ಲೂಕಿನ ಕುರುವಳ್ಳಿಯ ಆರ್ಯನ್ ಅನಿಲ್ ಕೋಟಾದ ಅದಮಾರು ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಸಂಯುಕ್ತ ಕಾಲೇಜು ಒಕ್ಕೂಟದಡಿ ಜನತಾ ಪಿ ಯು ಕಾಲೇಜು ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಆಲ್ ರೌಂಡ್ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆರ್ಯನ್ ಆಗುಂಬೆ ಎ.ವಿ.ಎಂ. ಶಾಲೆಯಲ್ಲಿ ಓದುವಾಗ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು. ಆರ್ಯನ್ ಕುಂದಾಪುರ ಎಕ್ಸ್ ಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಯಾಗಿದ್ದು ಇವರು ಮೇಲಿನಕುರುವಳ್ಳಿಯ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕುರುವಳ್ಳಿ ಅನಿಲ್ ಮತ್ತು ರಮ್ಯಾ ಅನಿಲ್ ಅವರ ಮಗ.
