ತೀರ್ಥಹಳ್ಳಿಯ ಜೆಸಿಐ ಸಂಸ್ಥೆಯ ವತಿಯಿಂದ ವಿವಿಧ ಕ್ರಿಯಾತ್ಮಕ ಕಾರ್ಯಕ್ರಮಗಳ ಸಪ್ತಾಹ ಧ್ವಜಾರೋಹಣದ ಮೂಲಕ ಆರಂಭಗೊಂಡಿದೆ. ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಕುವೆಂಪು ವೃತ್ತದ ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಸಮೀಪ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಬುಧವಾರದಂದು ಆರ್ಥಿಕ ಸ್ವಾತಂತ್ರ್ಯ ತರಬೇತಿ ಕುರಿತು ಪ್ರಮೋದ್ ಸಂಪನ್ಮೂಲ ವ್ಯಕ್ತಿಯಾಗಿ ಉಪಯುಕ್ತ ಮಾಹಿತಿ ನೀಡಿದ್ದು ಕೌಶಲ್ಯ ಆಧಾರಿತ ಕಾರ್ಯಗಾರವನ್ನು ಮನೋಜ್ ಕುಮಾರ್ ನಡೆಸಿಕೊಟ್ಟರು.
ಸೆಪ್ಟೆಂಬರ್ 11 ರಂದು ಶೆಟಲ್ ಬ್ಯಾಡ್ಮಿಟನ್ ಪಂದ್ಯಾವಳಿ, ಜುಂಬಾ ಫಿಟ್ನೆಸ್ ತರಬೇತಿ, 12 ರಂದು ವ್ಯಾಪಾರ ಮಂಡಳಿ ನಾಮಫಲಕ ಅಳವಡಿಕೆ, ಬಿಸಿನೆಸ್ ರೀಲ್ ಮ್ಯಾರಥಾನ್, 13 ರಂದು ಕರ್ತವ್ಯಗಾರ ಜಾಗೃತಿ ಅರ್ಜಿ, ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕರ್ತವ್ಯಗಳ ಅರ್ಜಿ, 14 ರಂದು ಒಂದು ಲಕ್ಷ ವಿಷನ್ ಅರ್ಜಿ ಹಾಗೂ ಸಂಜೆ 6 ಗಂಟೆಗೆ ಗೋಪಾಲಗೌಡ ರಂಗಮಂದಿರದಲ್ಲಿ ಲಾವಣ್ಯ ರಿ. ಬೈಂದೂರು ಅರ್ಪಿಸುವ “ನಾಯಿ ಕಳೆದಿದೆ” ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯದರ್ಶಿ ಎಚ್.ಜಿ.ಎಫ್.
ನಟೇಶ್, ಜಿಸಿ ಸ್ಯಾಟ್ ರಾಷ್ಟ್ರೀಯ ಸಂಯೋಜಕ ಅಭಿಜಿತ್ ಹಿರಿಯ ಮತ್ತಿತರು ಇದ್ದರು.


.jpeg)
