ಶಿವಮೊಗ್ಗದಲ್ಲಿ ಶೋ ರೂಮ್ ಆರಂಭಿಸಿದ

ನಂಬಿಕಸ್ತ ಚಿನ್ನಾಭರಣ ಮಳಿಗೆ ನ್ಯಾಷನಲ್‌ ಗೋಲ್ಡ್‌ ಅಂಡ್‌ ಡೈಮಂಡ್

ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲು ಹಾಲ್ ಮಾರ್ಕ್ ಚಿನ್ನಾಭರಣ ಮಳಿಗೆ ಸ್ಥಾಪನೆ ಮಾಡಿದ ಹೆಗ್ಗಳಿಕೆಯ ನ್ಯಾಷನಲ್ ಗೋಲ್ಡ್ ಮತ್ತು ಡೈಮಂಡ್ ಸಂಸ್ಥೆ ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿ ನೂತನ ಶೋ ರೂಮ್ ಆರಂಭ ಮಾಡಿದೆ.

ವ್ಯಾಪಾರದ ಜೊತೆಗೆ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿರುವ ಈ ಸಂಸ್ಥೆ ಈಗಾಗಲೇ ತೀರ್ಥಹಳ್ಳಿ, ಕೊಪ್ಪ, ಹೊಸನಗರ, ಶೃಂಗೇರಿ, ಶಿವಮೊಗ್ಗ ಭಾಗಗಳಲ್ಲಿ ಜನಪ್ರಿಯಗೊಂಡಿದೆ.

ದೊಡ್ಡ ಕಂಪನಿಗಳಿಗೆ ಹೋಲಿಸಿದರೆ ದರದಲ್ಲಿ ತೀರಾ ಚೌಕಾಶಿ ಮಾಡದ ಮತ್ತು ಸದಾ ಕಾಲ ವ್ಯಾಪಾರ ಮಾಡುವ ಗ್ರಾಹಕರಿಗೆ ನಂಬಲಾಗದಷ್ಟು ರಿಯಾಯಿತಿ ನೀಡುವ ಈ ಸಂಸ್ಥೆ ಆ ಕಾರಣಕ್ಕಾಗಿ ಜನ ಸಾಮಾನ್ಯರ ನೆಚ್ಚಿನ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಯಾವ ಬಿಗುಮಾನವು ಇಲ್ಲದೆ ತೀರಾ ಸರಳವಾಗಿ ಗ್ರಾಹಕರ ಜೊತೆಗೆ ಬೆರೆಯುವ ಮಾಲೀಕರಾದ ಯೂಸುಫ್ ಹೈದರ್, ಮತ್ತು ಕಬೀರ್ ನಡವಳಿಕೆ ಸಂಸ್ಥೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇಬ್ರಾಹಿಂ ಷರೀಫ್‌ ಸಹೋದರರ ತಂದೆ ಹಾಜಿ ಶೇಕ್ ಅಹಮದ್ ರವರು ಚಿಕ್ಕದಾಗಿ ಆರಂಭ ಮಾಡಿದ ನ್ಯಾಷನಲ್ ಸಂಸ್ಥೆ ಇಬ್ರಾಹಿಂ, ಮತ್ತು ರೆಹಮಾನ್ ಅವರ ನೇತೃತ್ವದಲ್ಲಿ ಈಗಾಗಲೇ ರಸ್ತೆಗಳಿಂದ ಹಿಡಿದು ಶಿವಮೊಗ್ಗ ವಿಮಾನ ನಿಲ್ದಾಣದ ತನಕ ನಿರ್ಮಾಣ ಕಾರ್ಯಗಳನ್ನು ಕೈಗೊಂಡು ಯಶಸ್ವಿಯಾಗಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.

ಅಬ್ದುಲ್ ಕಲಾಂ ತೀರ್ಥಹಳ್ಳಿಯಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪನೆ ಮಾಡಿ ಆಸಕ್ತಿಯುಳ್ಳ ಪ್ರತಿಭೆಗಳಿಗೆ ಬೆಂಗಳೂರು ಮಟ್ಟದ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ. ಸುಲೇಮಾನ್ ತೀರ್ಥಹಳ್ಳಿಯ ಮೊದಲ ಸೂಪರ್ ಬಜಾರ್ ನ್ಯಾಷನಲ್ ಸೂಪರ್ ಬಜಾರ್ ಸ್ಥಾಪನೆ ಮಾಡಿ ಯಶಸ್ಸು ಕಂಡಿದ್ದಾರೆ.

ತಮ್ಮ ವ್ಯವಹಾರದ ಪಾಲಿನಲ್ಲಿ ಬಂದ ಲಾಭದಲ್ಲಿ ದೊಡ್ಡ ಮೊತ್ತವನ್ನೇ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧಾರಾಳವಾಗಿ ನೀಡುತ್ತಿರುವ ಈ ಕುಟುಂಬ ಅ ಕಾರಣಕ್ಕೂ ಜಾತ್ಯತೀತ, ಧರ್ಮತೀತವಾಗಿ ಗೌರವಕ್ಕೆ ಪಾತ್ರವಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post