ತೀರ್ಥಹಳ್ಳಿಯಲ್ಲಿ ರಘು ದೀಕ್ಷಿತ್ ಗಿಟಾರ್ ಸದ್ದು
ಡಿಸೆಂಬರ್ 5,6,7, ರಂದು ವಾಗ್ದೇವಿ ಸ್ಕೂಲ್ ಡೇ
1999ರಲ್ಲಿ ಆರಂಭಗೊಂಡ
ಸತ್ಪಥ ಎಜ್ಯುಕೇಷನ್ ಟ್ರಸ್ಟ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಗ್ದೇವಿ ವಿದ್ಯಾಸಂಸ್ಥೆ
25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಬೆಳ್ಳಿಹಬ್ಬ ಸ್ಮರಣೀಯಗೊಳಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ
ಎಂದು ವಾಗ್ದೇವಿ ಟ್ರಸ್ಟ್ ಅಧ್ಯಕ್ಷ ಜಗದೀಶ್ ಕೆ.ಎಸ್. ತಿಳಿಸಿದ್ದಾರೆ.ಕೇವಲ ಇಬ್ಬರಿಂದ ಆರಂಭಗೊಂಡ ವಾಗ್ದೇವಿ ಶಾಲೆಯಲ್ಲಿ ಈಗ 1,800 ವಿದ್ಯಾರ್ಥಿಗಳು ಪ್ರಸ್ತುತ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ
ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ,
ತಾಂತ್ರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿ ವೃತ್ತಿ ಆರಂಭಿಸಿದ್ದಾರೆ ಎಂದು ಹೇಳಿದರು.
25 ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ನವೆಂಬರ್ 29 ರಂದು ಪ್ರತಿಭಾ ಪುರಸ್ಕಾರ ಮತ್ತು ಪತ್ರಕರ್ತರ ಜೊತೆ ಮಕ್ಕಳ ಸಂವಾದ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಪೂರ್ವಿತ ನಿರಂಜನ್, ಸದಸ್ಯ ಧರ್ಮೇಶ್ ಎಸ್.ಕೆ., ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು ಮತ್ತಿತರರು ಭಾಗವಹಿಸಲಿದ್ದಾರೆ.
ಡಿಸೆಂಬರ್ 5, 6, 7 ರಂದು ಬೆಳ್ಳಿ ಬೆಡಗು ಸಂಭ್ರಮ ನಡೆಯಲಿದೆ. ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು 3 ದಿನಗಳು ನಡೆಯಲಿದೆ. ಡಿ.7ರ ಸಂಜೆ ಖ್ಯಾತ ಸಂಗೀತಗಾರ ರಘು ದೀಕ್ಷಿತ್ ತಂಡದಿಂದ ಸಂಗೀತ ಸಂಜೆ ನಡೆಯಲಿದೆ ಎಂದು ಜಗದೀಶ್ ಹೇಳಿದರು.ವಿದ್ಯಾರ್ಥಿಗಳ ಭವಿಷ್ಯವನ್ನು
ಉಜ್ವಲಗೊಳಿಸುವ ಶೈಕ್ಷಣಿಕ, ಸಾಹಿತ್ಯ, ಕಲೆ, ಸಂಸ್ಕೃತಿ, ಜಾಗೃತಿ ಮೂಡಿಸುವ ಮೂಲಕ ಬೆಳ್ಳಿಹಬ್ಬವನ್ನು
ಸ್ಮರಣೀಯಗೊಳಿಸುತ್ತಿದ್ದೇವೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿರು ವಿಜ್ಞಾನಿ, ವೈದ್ಯರು,
ತಂತ್ರಜ್ಞರ ಜೊತೆ ಸಂವಾದ ನಡೆಸುತ್ತಿದ್ದೇವೆ. ಇದು ಮಕ್ಕಳ ಮುಂದಿನ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಿದೆ
ಎಂದರು.
ಪತ್ರಿಕಾಗೋಷ್ಟಿಯಲ್ಲಿ ಖಜಾಂಚಿ ಶಶಿಧರ್
ಹೆಚ್.ಪಿ. ಇದ್ದರು.

