ಪ್ರೊ. ಮಹಾದೇವ್ ಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ
ಜಿಲ್ಲಾ ಸಂಘಟನಾ ಸಂಚಾಲಕಿಯಾಗಿ ಮಂಜುಳಾ ನಾಗೇಂದ್ರ ನೇಮಕ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕರಾಗಿ ಕುರುವಳ್ಳಿಯ ವರಲಕ್ಷ್ಮೀ ಬಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪರಿಶಿಷ್ಟ ನೌಕರರ ಒಕ್ಕೂಟದ ಅಧ್ಯಕ್ಷ ಪ್ರೊ.ಮಹಾದೇವ ಸ್ವಾಮಿ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿ ಸಮತಿ ಪುನರಚನೆ ನಡೆಯಿತು.
ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕರಾಗಿ ಪಟ್ಟಣ ಪಂಚಾಯಿತಿ ಸದಸ್ಯೆ ಮಂಜುಳಾ ನಾಗೇಂದ್ರ, ಸಂಘಟನಾ
ಸಂಚಾಲಕರಾಗಿ ಪೂರ್ಣೇಶ್ ಮಹಿಷಿ, ಕುರುವಳ್ಳಿ ಯಲ್ಲಪ್ಪ, ನಾಗೇಶ್ ನೊಣಬೂರು, ಖಜಾಂಚಿಯಾಗಿ ಮನೋಜ್
ಬಾಳಗಾರು, ಸದಸ್ಯರುಗಳಾಗಿ ನಾಗರಾಜ್ (ಕಂಬ್ಳೆ), ಅಣ್ಣಪ್ಪ, ರುದ್ರೇಶ್ ಕೋಟೆಗದ್ದೆ ನೇಮಕಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಸಂಘಟನಾ ಸಂಚಾಲಕರಾದ ಎಂ.ಆರ್.
ಶಿವಕುಮಾರ್, ಎ.ಡಿ. ಆನಂದಪ್ಪ, ಜಿಲ್ಲಾ ಮುಖಂಡರಾದ ಹುಣಸೋಡು ಶೇಷಪ್ಪ, ಕಾಶಿಪುರ್ ಗೋವಿಂದ, ಹಾರೋಗೊಳಿಗೆ
ವಿಶ್ವನಾಥ, ಹಾಲೇಶ್ ಇದ್ದರು.

