ತೀರ್ಥಹಳ್ಳಿಗೆ ಕೀರ್ತಿ ತಂದ ಪೊಲೀಸ್ ಸುಭಾಷ್
ಇತ್ತೀಚಿಗೆ ಉತ್ತರ ಪ್ರದೇಶದ
ಲಕ್ನೋದಲ್ಲಿ ನಡೆದ 71ನೇ ಅಖಿಲ ಭಾರತೀಯ ಪೊಲೀಸ್
ಕ್ರೀಡಾಕೂಟದಲ್ಲಿ ಕರ್ನಾಟಕ ಪೊಲೀಸ್ ಖೋ-ಖೋ ತಂಡವು ಭಾಗವಹಿಸಿ ಬೆಳ್ಳಿ ಪದಕವನ್ನು
ಗೆದ್ದುಕೊಂಡಿದೆ.
ತಂಡದಲ್ಲಿ ಮೇಲಿನ ಕುರುವಳ್ಳಿಯ ಸುಭಾಷ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕರ್ನಾಟಕ ತಂಡ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆಯಲು ಪ್ರಮುಖ ಪಾತ್ರ ವಹಿಸಿದ್ದರು.
ಸುಭಾಷ್ ಪೊಲೀಸ್ ಕಾನ್ಸ್ಟೇಬಲ್ ಆಗಿ ತೀರ್ಥಹಳ್ಳಿ
ಸೇರಿದಂತೆ ಹಲವೆಡೆ ಕಾರ್ಯ ನಿರ್ವಹಿಸಿದ್ದಾರೆ. ಸ್ವತಃ ಖೋಖೋ ಆಟಗಾರರಾಗಿದ್ದರಿಂದ ಕರ್ನಾಟಕ ಪೊಲೀಸ್
ತಂಡ ಪ್ರತಿನಿಧಿಸಿ ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ಸುಭಾಷ್ ಮೇಲಿನಕುರುವಳ್ಳಿಯ
ತಿರುಪತಿ, ರಾಜೇಶ್ವರಿ ದಂಪತಿಗಳ ಮಗ. ಸುಭಾಷ್ ಮತ್ತು ತಂಡದ ಸಾಧನೆಯನ್ನು ಪೃಥ್ವಿಶ್ರಮ ಕಲ್ಲುಗಣಿ
ಹಾಗೂ ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ಕಾರ್ಯದರ್ಶಿ ಮೇಲಿನ ಕುರುವಳ್ಳಿ ಮಂಜುನಾಥ್ ಹಾಗೂ ಗ್ರಾಮಸ್ಥರು
ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.