ಕಾಗೋಡು ಪುತ್ರಿ ಬಿಜೆಪಿ ಪಾಲು
ಕಾಂಗ್ರೆಸ್ನ ಅತ್ಯಂತ
ಹಿರಿಯ ರಾಜಕಾರಣ ಮಾಜಿ ಸಚಿವ, ಸಭಾಪತಿ, ಸಮಾಜವಾದಿ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ
ಬಿಜೆಪಿಗೆ ಸೇರ್ಪಡೆಗೊಂಡಿರುವುದು ಸದ್ಯದ ಸಂಚಲನ ಮೂಡಿಸಿರುವ ಸುದ್ದಿಯಾಗಿದೆ. ಡಾ. ರಾಜನಂದಿನ ಸಾಗರದಲ್ಲಿ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಕಾಗೋಡು ತಿಮ್ಮಪ್ಪರ ಸೋದರಳಿಯ
ಆಗಿರುವ ಬೇಳೂರು ಗೋಪಾಲಕೃಷ್ಣ ಪಾಲಾಗಿತ್ತು.
ಮಗಳ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರೀಯಿಸಿರುವ ಕಾಗೋಡು ತಿಮ್ಮಪ್ಪ ಇದು ದುರದೃಷ್ಟಕರ ನಿರ್ಧಾರ. ನಾನು ಜೀವನದುದ್ದಕ್ಕೂ ತತ್ವಕ್ಕೆ ಬದ್ಧನಾಗಿ ರಾಜಕಾರಣ ಮಾಡಿದವನು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಈ ಕುರಿತು ಮಗಳು ನನ್ನ ಜೊತೆ ಚರ್ಚೆಯೇ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.