60-70ರ ದಶಕದಲ್ಲಿ ಬಹುತೇಕ ಆ ಕಾಲದ ಖ್ಯಾತ ವೃತ್ತಿ ನಾಟಕ ರಂಗಭೂಮಿ ಕಂಪನಿಗಳಿಗೆ ಸರಿಸಾಟಿಯಾಗಿ ಹೆಸರು ಮಾಡುವ ಮೂಲಕ ಗಮನ ಸೆಳೆದಿದ್ದ ಹೊದಲ ಅಂಬಾಮಿತ್ರ ಮಂಡಳಿಯ ಪ್ರಮುಖ ಕಲಾವಿದರಾಗಿದ್ದ ಟಿ.ಪಿ.ಸೀತಾರಾಮಯ್ಯ (87) ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ. ಅವರು ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪೌರಾಣಿಕ
ಹಾಗೂ ಸಾಮಾಜಿಕ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾಗಿದ್ದ ಟಿ.ಪಿ.ಸೀತಾರಾಮಯ್ಯ ಉತ್ತಮ
ನಟರಾಗಿ ಗುರುತಿಸಿಕೊಂಡಿದ್ದರು. ತೀರ್ಥಹಳ್ಳಿಯ ರಂಗಭೂಮಿ ಇತಿಹಾಸದಲ್ಲಿ ಪ್ರಮುಖ ಹೆಸರಾಗಿರುವ
ಅಂಬಾಮಿತ್ರ ಮಂಡಳಿ ಆ ಕಾಲದಲ್ಲಿ ದಕ್ಷಿಣ ಕನ್ನಡ ಚಿಕ್ಕಮಗಳೂರು ಶಿವಮೊಗ್ಗ ಮುಂತಾದ ಕಡೆಗಳಲ್ಲಿ ನಾಟಕಗಳನ್ನು
ನಿರಂತರವಾಗಿ ಪ್ರದರ್ಶಿಸುತ್ತ ರಂಗಾಸಕ್ತರ ಗಮನ ಸೆಳೆದಿತ್ತು.
