ತೀರ್ಥಹಳ್ಳಿ ಪಟ್ಟಣದ ಅಜಾದ್ ರಸ್ತೆಯಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನದ ಮುಂಭಾಗದ ಶಾರದಾ ಟ್ರೇಡರ್ಸ್ ಕಟ್ಟಡದ ಮೊದಲನೇ ಅಂತಸ್ತಿನಲ್ಲಿ ಬಿಜೆಪಿ ನೂತನ ಕಛೇರಿ ಉದ್ಘಾಟನೆ ಗುರುವಾರ ಬೆಳಿಗ್ಗೆ ನಡೆಯಿತು.
ಗೃಹಸಚಿವ ಆರಗ ಜ್ಞಾನೇಂದ್ರರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ನೂತನ ಕಚೇರಿ ರಾಮನವಮಿ ದಿನದಂದು ಧಾರ್ಮಿಕ ವಿಧಿ ವಿಧಾನದಿಂದ ಆರಂಭಗೊಂಡಿದೆ. ಈ ಹಿಂದೆ ಕೊಪ್ಪ ಸರ್ಕಲ್ ನಲ್ಲಿದ್ದ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಮುಖಂಡರಾದ ಸಿ.ಬಿ. ಈಶ್ವರ್, ಸಂದೇಶ್ ಜವಳಿ, ಗೀತಾ ಶೆಟ್ಟಿ ಮುಂತಾದವರು ಇದ್ದರು.