ಕುವೆಂಪು
ಬಳಿಕ ಉನ್ನತ ಹುದ್ದೆಗೇರಿದ ಕೀರ್ತಿ
ತೀರ್ಥಹಳ್ಳಿ
ತಾಲ್ಲೂಕಿಗೆ ಮತ್ತೊಂದು ಪ್ರತಿಷ್ಠೆಯ ಗರಿ
ತೀರ್ಥಹಳ್ಳಿ ತಾಲ್ಲೂಕಿನ ನೆರಟೂರು ಗ್ರಾಮದ ಪ್ರೊ. ಲೋಕನಾಥ್ ರಾಜ್ಯದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ನೂತನ ಉಪಕುಲಪತಿಗಳಾಗಿ ಆಯ್ಕೆಯಾಗಿದ್ದಾರೆ. ಮೂಲತಃ ಭೌತಶಾಸ್ತ್ರದ ಪ್ರೊಪೇಸರ್ ಹಾಗೂ ವಿಜ್ಞಾನಿಯಾಗಿ 2014ರಲ್ಲಿ ಕರ್ನಾಟಕ ಸರ್ಕಾರದ ಸರ್.ಸಿ.ವಿ. ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಅಲ್ಲದೇ ದೇಶ ವಿದೇಶದಲ್ಲಿ ಹತ್ತು ಹಲವು ವಿಚಾರ ಸಂಕಿರಣಗಳು ಹಾಗೂ ಉಪನ್ಯಾಸಗಳಲ್ಲಿ ಪಾಲ್ಗೊಂಡಿದ್ದಾರೆ.
ಈ ಮೊದಲು
ತೀರ್ಥಹಳ್ಳಿಯವರೇ ಆದ ಮೇರು ಸಾಹಿತಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು
ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದರಲ್ಲದೇ ಕ್ಯಾಂಪಸ್ಸಿಗೆ ಮಾನಸ
ಗಂಗೋತ್ರಿ ಎಂಬ ಹೆಸರು ಬರಲು ಕೂಡ ಕಾರಣರಾಗಿದ್ದರು.
ಕುವೆಂಪು
ಬಳಿಕ ತೀರ್ಥಹಳ್ಳಿ ತಾಲ್ಲೂಕಿನವರಾಗಿ ಈ ಉನ್ನತ ಹುದ್ದೆಗೆ ಏರಿದ ಕೀರ್ತಿಗೆ ಪ್ರೊ. ಲೋಕನಾಥ್ ಭಾಜನರಾಗಿದ್ದಾರೆ.
ಅವರು ನೆರಟೂರು ಗ್ರಾಮದ ಕೃಷ್ಣಪ್ಪಗೌಡ ದಂಪತಿಗಳ ಪುತ್ರ.