ಜೀವ ಕಳೆದುಕೊಳ್ಳುತ್ತಿದ್ದ 50ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳ ಪಾಲಿನ ಆಪತ್ಬಾಂದವ
ಈ ಚಿತ್ರದಲ್ಲಿರುವ ಯುವಕನ ಹೆಸರು ಹುಸೇನ್ ಮೆಹಬೂಬ್. ಸದ್ಯ ಈತ ಇಡೀ ದೇಶದಾದ್ಯಂತ ಸುದ್ದಿಯಾಗಿದ್ದಾನೆ. ಆದಕ್ಕೆ ಕಾರಣ ಗುಜರಾತಿನ ಮೋರ್ಬಿ ತೂಗು ಸೇತುವೆ
ದುರಂತ.
ಹಣಬಾಕ ಅನಾನುಭವಿ ಓರೆವಾ ಕಂಪನಿ ರಿಪೇರಿ ಹಾಗೂ ನಿರ್ವಹಣ ಗುತ್ತಿಗೆಯನ್ನು ಪಡೆದಿತ್ತು ಎಂದು
ಹೇಳಲಾದ ಈ ನತದೃಷ್ಟ ಸೇತುವೆಯ ಮೇಲೆ ಅಂದು ಮುನ್ನೂರಕ್ಕೂ ಹೆಚ್ಚು ಮಂದಿ ತೂಗು ಸೇತುವೆ ಮೇಲೆ ನಿಂತು
ನದಿಯ ಸೌಂದರ್ಯವನ್ನು ಸವಿಯುತ್ತಿದ್ದರು. ಕ್ಷಣ ಮಾತ್ರದಲ್ಲಿ ಸೇತುವೆ ಕುಸಿದು ಅದರಲ್ಲಿ ಬಹುತೇಕ ಮಂದಿ
ನೀರು ಪಾಲಾಗಿದ್ದರು. ಈಜು ಗೊತ್ತಿದ್ದವರು ದಡ ಸೇರಿದರೆ ಹೆಂಗಸರು, ಮಕ್ಕಳು, ವಯಸ್ಸಾದವರು ಸೇರಿದಂತೆ
ಈಜುಬಾರದ 136ಕ್ಕೂ ಹೆಚ್ಚು ಮಂದಿ ಬಲಿಯಾಗಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಏಕಾಂಗಿಯಾಗಿ 50ಕ್ಕೂ
ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ಈ ಯುವಕ ರಕ್ಷಿಸಿದ್ದಾನೆ. ಆ ಮೂಲಕ ಎಲ್ಲಕ್ಕಿಂತಲೂ ಮನುಷ್ಯ
ಧರ್ಮ ದೊಡ್ಡದು ಎಂದು ಸಾರಿದ್ದಾನೆ.
ಮತಾಂದ ಹಿಂದುಗಳು ಅಮಾಯಕ ಮುಸ್ಲಿಂ ಗುರಿಯಾಗಿಸಿ, ಮತಾಂದ ಮುಸ್ಲಿಂಮರು ಅಮಾಯಕ ಹಿಂದುಗಳನ್ನು
ಕೊಲ್ಲಬೇಕೆಂದು ಕೂಗಾಡುತ್ತಿರುವ ಈಗಿನ ಕಾಲಘಟ್ಟದಲ್ಲಿ ಹುಸೇನ್ ಮೆಹಬೂಬ್ ಒಬ್ಬ ಮನುಷ್ಯನಾಗಿ ಮನುಷ್ಯರನ್ನು
ಉಳಿಸುವುದು ತನ್ನ ಜವಾಬ್ದಾರಿ ಎಂದು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿರುವುದು ನಿಜವಾದ ಭಾರತ
ಹೇಗಿತ್ತು ಮತ್ತು ಹೇಗಿರಬೇಕು ಎಂಬುದಕ್ಕೆ ಅಮೂಲ್ಯ ಉದಾಹರಣೆಯಂತಿದೆ.
