ವಕೀಲ ಆಡಿನಸರ ಸತೀಶ್‌ ಸಮರ್ಥ ವಾದ ಮಂಡನೆ

ಅಕ್ರಮ ಭೂ ಒತ್ತವರಿ ನಿಷೇಧ ವಿಶೇಷ ನ್ಯಾಯಲಯದ ಪ್ರಕರಣ
ತೀರ್ಥಹಳ್ಳಿಯ 9 ರೈತರ ಪ್ರಕರಣ ಖುಲಾಸೆ

ಕಳೆದ ನಾಲ್ಕು ವರ್ಷಗಳಿಂದ Land grabbing prohibited act 2011 ರ ಅಡಿಯಲ್ಲಿ ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ರೈತರ ಮೇಲೆ ಪ್ರಕರಣಗಳು ದಾಖಲಾಗಿದ್ದು. ಅದರಂತೆ ತೀರ್ಥಹಳ್ಳಿಯ ನೂರಾರು ರೈತರ ಮೇಲೆ ಪ್ರಕರಣ ದಾಖಲಾಗಿ ಬೆಂಗಳೂರು ಅಲೆಯುವಂತಾಗಿದೆ.

ಆಡಳಿತ ಪಕ್ಷಗಳೇ ಭೂ ಮಂಜೂರಾತಿ ನೆಪದಲ್ಲಿ ರೈತರಿಂದ 51, 53,57, ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಯಾವುದೇ ಸ್ಪಷ್ಟ ಮಾನದಂಡಗಳಿಲ್ಲದೆ,‌ 

ಭೂ ಮಂಜೂರಾತಿಗೆ ಅರ್ಜಿ ಸ್ವೀಕಾರ ಮಾಡಿಕೊಂಡು, ನಂತರ ಅದೇ ರೈತರ ಮೇಲೆ ಅಕ್ರಮ ಕಬಳಿಕೆ ಎಂದು ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ರೈತರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ.

ಇತ್ತಿಚೆಗೆ ಸರ್ಕಾರ ಸದರಿ ಕಾಯಿದೆಯಿಂದ ರೈತರ ಪ್ರಕರಣವನ್ನು ಹೊರತು ಪಡಿಸುವುದಾಗಿ  ಹೇಳಿ ಚರ್ಚೆ ಸದನದಲ್ಲಿ ಮಾಡಿದ್ದರು ಸಹ ಅದು ಕಾಯಿದೆ ರೂಪದಲ್ಲಿ ಬರಲು ಸಾಕಷ್ಟು ಸಮಯಗಳು ಹಿಡಿಯಬಹುದು.

ಆದರೆ ನ್ಯಾಯಾಲಯವು ಇದನ್ನು ಪರಿಗಣನೆಗೆ ತೆಗೆದುಕೊಳ್ಳಲು ಬರದ ಕಾರಣ ಸಹಜವಾಗಿ ಪ್ರಕರಣಗಳ ತನಿಖೆ ನಡೆಯುತ್ತಲೇ ಇದೆ.

ಅದರಂತೆ ಈ ತಿಂಗಳಿನಲ್ಲಿ ತೀರ್ಥಹಳ್ಳಿಯ ಒಂಬತ್ತು ಪ್ರಕರಣಗಳಲ್ಲಿ ತೀರ್ಪು ಹೊರಬಿದ್ದಿದ್ದು, ಸದರಿ ಪ್ರಕರಣಗಳಲ್ಲಿ ಆರೋಪಿತರನ್ನು ಖುಲಾಸೆ ಮಾಡಲಾಗಿದೆ.

ಆರೋಪಿಗಳಾದ ರೈತರ ಪರವಾಗಿ ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ತೀರ್ಥಹಳ್ಳಿಯ ವಕೀಲರಾದ ಆಡಿನಸ ಸತೀಶ್ ವಾದಿಸಿದ್ದು. ಕಳೆದ 4 ವರ್ಷಗಳಿಂದ  ಬೆಂಗಳೂರು ನ್ಯಾಯಾಲಯದಲ್ಲಿ ತನ್ನ ಕಕ್ಷಿದಾರರ ಪರವಾನಗಿ ತಾವೇ ವಾದಿಸುತ್ತಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post