ಸೆಪ್ಟೆಂಬರ್ 18ಕ್ಕೆ ಉಚಿತ ಆರೋಗ್ಯ, ಶಸ್ತ್ರಚಿಕಿತ್ಸಾ ಶಿಬಿರ
ಸಾರ್ವಜನಿಕರಿಗೆ ಮುಕ್ತ ಅವಕಾಶ
ಆರೋಗ್ಯಯುತ ಜೀವನ ನಿರ್ವಹಣೆಗೆ ಸೂಪರ್ ಪ್ಲಾನ್
ಬ್ರಹ್ಮಶ್ರೀ ನಾರಾಯಣ ಗುರು ಎಲ್ಲಾ ವರ್ಗದ
ಸಮೂದಾಯಕ್ಕೆ ಸೇರಿದವರು. ತಳ ಸಮೂದಾಯದ ಏಳಿಗೆಗಾಗಿ ಜೀವಮಾನ ದುಡಿದವರು. ಅಸ್ಪೃಶ್ಯತೆ ನಿವಾರಣೆಯ ಜೊತೆಗೆ
ಸಮಾಜದಲ್ಲಿನ ಶೋಷಣೆಯನ್ನು ತನ್ನದೇ ಮಾರ್ಗಗಳ ಮೂಲಕ ವಿರೋಧಿಸಿ ಶಾಂತಿ ಸಂದೇಶ ಸಾರಿದ ದಾರ್ಶನಿಕರಾಗಿದ್ದಾರೆ.
ಅಂತವರ ಜನ್ಮದಿನವನ್ನು ಆಚರಿಸುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ಸಾಮಾಜಿಕ, ಆರ್ಥಿಕವಾಗಿ
ಹಿಂದುಳಿದ ಕುಟುಂಬಗಳು ಸಾಕಷ್ಟಿದೆ. ಅಂತವರನ್ನು ಗುರುತಿಸುವುದು ಬಹಳ ಮುಖ್ಯ. ಕೊರೊನಾ ಸಂದರ್ಭದಲ್ಲಿ
ಆಗಿರುವ ಆರ್ಥಿಕ ಹಿಂಜರಿತದಿಂದ ಜನಸಾಮಾನ್ಯರ ಸ್ಥಿತಿ ಹೇಳತೀರದು. ಆರೋಗ್ಯಕ್ಕೆ ಖರ್ಚು ಮಾಡದ ದುಸ್ಥಿತಿ
ನಿರ್ಮಾಣವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಾದ ಜೀವನ ನಡೆಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.
ಈ ಹಿನ್ನಲೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಪ್ರಯುಕ್ತ ಹೋಬಳಿ ಮಟ್ಟದಲ್ಲಿ ಉಚಿತ
ಆರೋಗ್ಯ ಶಿಬಿರ ಮತ್ತು ಅವಶ್ಯಕತೆ ಇರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತಿದೆ
ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ ಗುರುವಾರ ಪಟ್ಟಣದ
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಹೇಳಿದರು.
ಮಂಗಳೂರಿನ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಜನರಲ್ ಮೆಡಿಸಿನ್, ಶ್ವಾಸಕೋಶ ಸಂಬಂಧಿ ರೋಗ, ಚರ್ಮರೋಗ, ಸ್ತ್ರೀ ರೋಗ, ಕಿವಿ-ಮೂಗು-ಗಂಟಲು-ನೇತ್ರ ಚಿಕಿತ್ಸೆ,
ಥೈರಾಯಿಡ್, ಹರಣಿ, ಗರ್ಭಕೋಶ, ಮೂಲವ್ಯಾಧಿ ಮುಂತಾದ ಗಂಭೀರ ಸ್ವರೂಪದ
ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಮೊದಲ ಹಂತದ ಈ ಶಿಬಿರಕ್ಕೆ ಹೊದಲದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಹೊದಲ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಗ್ರಾಮ ಪಂಚಾಯಿತಿ ಹೊದಲ ಇವರ ಸಹಭಾಗಿತ್ವದಲ್ಲಿ ಸೆಪ್ಟೆಂಬರ್ 17 ರ ಶನಿವಾರ ಬಿಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ
ಹೊದಲ ಸರ್ಕಾರಿ ಪ್ರಾಥಮಿಕ
ಶಾಲೆಯಲ್ಲಿ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಿಶಾಲ್ ಕುಮಾರ್ ಮಾತನಾಡಿ, ಬ್ರಹ್ಮಶ್ರೀ
ಜೀವನ ಚರಿತ್ರೆ ತಿಳಿಸಿಕೊಡುವ ಉದ್ದೇಶದಿಂದ ಪುಸ್ತಕ, ಜೊತೆಗೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ
ನಾರಾಯಣ ಗುರು ಭಾವಚಿತ್ರ ವಿತರಣೆ ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಉಮೇಶ್, ಜಿಲ್ಲಾ ಸಂಘಟನಾ ಉಪಾಧ್ಯಕ್ಷ ಲೋಕೇಶ್ ಟೆಂಕಬೈಲು, ಕಾರ್ಯದರ್ಶಿ ಹೊದಲ ಶಿವು, ತಾಲ್ಲೂಕು ಅಧ್ಯಕ್ಷ ವಿಶಾಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಜನಗಲ್ ರಾಮಚಂದ್ರ, ನಿರ್ದೇಶಕ ಯಡೂರು ದಿನೇಶ್ ಇದ್ದರು.