ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ನೂರಾರು ಕೋಟಿಯ ಅವ್ಯಹಾರದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನಿಸ್ಪಕ್ಷಪಾತ ತನಿಖೆ ನಡೆಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್ ಹೇಳಿಕೆ ನೀಡಿದ್ದಾರೆ.
ಅಸಲಿ ಹೆಗ್ಗಣಗಳು ಬಿಲ ಬಿಟ್ಟು ಹೊರಗೆ ಹೊರಡಲಾರವು, ಎರೇ ಹುಳಗಳನ್ನು ಬಂಧಿಸಿ ಕಂಬಿ ಒಳಗೆ ಇಡುವುದನ್ನು ಖಂಡಿಸುವ ಸಲುವಾಗಿ ಮಾಜಿ ಸಚಿವ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸುತ್ತಿದ್ದಾರೆ. ಗುಡ್ಡೇಕೊಪ್ಪದಿಂದ ಹೊರಟ ಪಾದಯಾತ್ರೆ ಹರಕೆರೆ ತಲುಪಿದೆ. ಮಂಗಳವಾರ ಹರಕೆರೆಯಿಂದ ಪಾದಯಾತ್ರೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಸಭೆ ಸೇರಲಿದೆ. ಈ ಸಭೆಗೆ ರಾಜ್ಯ ನಾಯಕರಾದ ಕೆಪಿಸಿಸಿ ಆಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸುತ್ತಿದ್ದಾರೆ.ನಾಲ್ಕು ದಿನಗಳ ಪಾದಯಾತ್ರೆ ಯಶಸ್ವಿಯಾಗಿ ಜರುಗಿದೆ.
ಕೊನೆಯ ದಿನದ ಪಾದಯಾತ್ರೆ ಹರಕೆರೆಯ ಶಿವದೇವಸ್ಥಾನ ಮುಂಭಾಗದಿಂದ ಬೆಳಿಗ್ಗೆ 10 ಗಂಟೆಗೆ ಹೊರಡಲಿದ್ದು
ಕಾಂಗ್ರೆಸ್ ಮುಖಂಡರು, ಕಾರ್ಯಕತ್ರರು ಭಾಗವಹಿಸುವಂತೆ ಅಮ್ರಪಾಲಿ ಸುರೇಶ್ ಆಹ್ವಾನಿಸಿದ್ದಾರೆ.

