ಮೇಲಿನಕುರುವಳ್ಳಿ ಗ್ರಾ.ಪಂ.ಗೆ ಭವ್ಯ ಸಾರಥ್ಯ
ಅವಿರೋಧ ಆಯ್ಕೆಗೊಂಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯ
ಹಂಚಿಕೆಯಂತೆ ಒಲಿದ ಅಧ್ಯಕ್ಷ ಸ್ಥಾನ
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ
ಅಧ್ಯಕ್ಷೆಯಾಗಿ ಭವ್ಯ ಅವಿರೋಧ ಆಯ್ಕೆಗೊಂಡಿದ್ದಾರೆ. ಹೊರಬೈಲು ಪ್ರಭಾಕರ್ ಉಪಾಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಜಯಲಕ್ಷ್ಮೀ ನಾಗೇಂದ್ರಾಚಾರ್ ಕೊಟ್ಟ ಮಾತಿನಂತೆ ರಾಜೀನಾಮೆ ನೀಡಿದ್ದು ಅಧ್ಯಕ್ಷರ ಪುನರ್ ಆಯ್ಕೆಗೆ
ಕಾರಣವಾಗಿದೆ.
ಸರ್ಕಾರ ನಿಗಧಿ ಪಡಿಸಿದ ಎರಡೂವರೆ ವರ್ಷದ ಮೀಸಲಾತಿಯಂತೆ ಈ ಇಬ್ಬರು
ಮಹಿಳೆಯರಿಗೆ ಅವಕಾಶ ಇತ್ತು.