ಸಾಲಕಟ್ಟಲು ರೈತರು ಬದ್ದರಾಗಿರಬೇಕು
ಶಿಸ್ತುಬದ್ದ ವ್ಯವಹಾರದಿಂದ ಅಭಿವೃದ್ದಿ ಸಾಧ್ಯ- ಬಸವಾನಿ ವಿಜಯದೇವ್
ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀನಾಥ್ ಮೇಲಿನಕೊಪ್ಪ, ಸಿಇಓ ಸುಧಾಕರ್, ನಿರ್ದೇಶಕರು ಇದ್ದರು. |
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರೈತರಿಗೆ ಸಾಲದ ಚೆಕ್ ವಿತರಿಸಿ ಬಸವಾನಿ ವಿಜಯದೇವ್ ಮಾತನಾಡಿದರು.
ಸುಸ್ತಿದಾರ ರೈತರು ಸಾಲ ಮರುಪಾವತಿ ಮಾಡಿದರೆ ಪಿಕಾರ್ಡ್ ಬ್ಯಾಂಕ್ ನಲ್ಲಿ ಶೇಕಡ 3ರಷ್ಟು ಬಡ್ಡಿಯಲ್ಲಿ ಹೊಸ ಸಾಲ ಪಡೆಯಬಹುದು. ರೈತರ ಪ್ರೋತ್ಸಾಹ ಸಹಕಾರ ಸಂಘಕ್ಕೆ ಅಗತ್ಯವಿದೆ. ಸಾಲ ಮರು ಪಾವತಿಗೆ ನಿಗಧಿತ ಕಾಲಾವಕಾಶ ಕಾಯಬಾರದು. ಅವಧಿ ಮುನ್ನ ಸಾಲ ತಿರುವಳಿ ರೈತರಿಗೆ, ಸಂಸ್ಥೆಗೆ ಲಾಭ.
ಕಠಿಣ ಪರಿಶ್ರಮ, ಶಿಸ್ತುಬದ್ದ ವ್ಯವಹಾರ ಸಂಸ್ಥೆ, ವ್ಯಕ್ತಿ ಬೆಳವಣಿಗೆಯ ಯಶಸ್ಸಿನ ಗುಟ್ಟು.
ಸಾಲ ಮರುಪಾವತಿ ಶಿಸ್ತಿನ ವ್ಯವಹಾರಕ್ಕೆ ಸಾಕ್ಷಿ. ಸಹಕಾರ ಸಂಸ್ಥೆ ಅಭಿವೃದ್ದಿ ಸುಲಭವಲ್ಲ ಎಂದು ರಾಜ್ಯ
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್ ಹೇಳಿದರು.
ಮಾಳೂರು ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೀಕೆ ಪ್ರಸನ್ನಕುಮಾರ್ ಮಾತನಾಡಿ,
ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಹೊಸ ರೈತರಿಗೆ ಸಾಲ ವಿತರಣೆ ಮಾಡಲಾಗಿದೆ. 7ವರೆ ಕೋಟಿ ಬೆಳೆ ಸಾಲ, 50 ಲಕ್ಷ ದೀರ್ಘಾವಧಿ ಸಾಲ, 60 ಲಕ್ಷ ಜಾಮೀನು ಸಾಲ ನೀಡಲಾಗಿದೆ.
ಹೊಸ ಸಾಲ ವಿರತಣೆಗೆ 1 ಕೋಟಿ ಬೇಕಿದೆ ಎಂದು ತಿಳಿಸಿದರು.