ಹೊಸ ರೈತರಿಗೆ ಸಾಲಕೊಟ್ಟ ಮಾಳೂರು ಕೃಷಿ ಪತ್ತಿನ ಸಹಕಾರ ಸಂಘ

ಸಾಲಕಟ್ಟಲು ರೈತರು‌ ಬದ್ದರಾಗಿರಬೇಕು

ಶಿಸ್ತುಬದ್ದ ವ್ಯವಹಾರದಿಂದ ಅಭಿವೃದ್ದಿ ಸಾಧ್ಯ- ಬಸವಾನಿ ವಿಜಯದೇವ್

ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀನಾಥ್‌ ಮೇಲಿನಕೊಪ್ಪ, ಸಿಇಓ ಸುಧಾಕರ್‌, ನಿರ್ದೇಶಕರು ಇದ್ದರು.

ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರೈತರಿಗೆ ಸಾಲದ ಚೆಕ್‌ ವಿತರಿಸಿ ಬಸವಾನಿ ವಿಜಯದೇವ್‌ ಮಾತನಾಡಿದರು.

ಸುಸ್ತಿದಾರ ರೈತರು ಸಾಲ ಮರುಪಾವತಿ ಮಾಡಿದರೆ ಪಿಕಾರ್ಡ್‌ ಬ್ಯಾಂಕ್‌ ನಲ್ಲಿ ಶೇಕಡ 3ರಷ್ಟು ಬಡ್ಡಿಯಲ್ಲಿ ಹೊಸ ಸಾಲ ಪಡೆಯಬಹುದು. ರೈತರ ಪ್ರೋತ್ಸಾಹ ಸಹಕಾರ ಸಂಘಕ್ಕೆ ಅಗತ್ಯವಿದೆ. ಸಾಲ ಮರು ಪಾವತಿಗೆ ನಿಗಧಿತ ಕಾಲಾವಕಾಶ ಕಾಯಬಾರದು. ಅವಧಿ ಮುನ್ನ ಸಾಲ ತಿರುವಳಿ ರೈತರಿಗೆ, ಸಂಸ್ಥೆಗೆ ಲಾಭ.


ಕಠಿಣ ಪರಿಶ್ರಮ, ಶಿಸ್ತುಬದ್ದ ವ್ಯವಹಾರ ಸಂಸ್ಥೆ, ವ್ಯಕ್ತಿ ಬೆಳವಣಿಗೆಯ ಯಶಸ್ಸಿನ ಗುಟ್ಟು. ಸಾಲ ಮರುಪಾವತಿ ಶಿಸ್ತಿನ ವ್ಯವಹಾರಕ್ಕೆ ಸಾಕ್ಷಿ. ಸಹಕಾರ ಸಂಸ್ಥೆ ಅಭಿವೃದ್ದಿ ಸುಲಭವಲ್ಲ ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಬಸವಾನಿ ವಿಜಯದೇವ್  ಹೇಳಿದರು.

ಮಾಳೂರು ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೀಕೆ ಪ್ರಸನ್ನಕುಮಾರ್‌ ಮಾತನಾಡಿ, ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಹೊಸ ರೈತರಿಗೆ ಸಾಲ ವಿತರಣೆ ಮಾಡಲಾಗಿದೆ. 7ವರೆ ಕೋಟಿ ಬೆಳೆ ಸಾಲ, 50 ಲಕ್ಷ ದೀರ್ಘಾವಧಿ ಸಾಲ, 60 ಲಕ್ಷ ಜಾಮೀನು ಸಾಲ ನೀಡಲಾಗಿದೆ. ಹೊಸ ಸಾಲ ವಿರತಣೆಗೆ 1 ಕೋಟಿ ಬೇಕಿದೆ ಎಂದು ತಿಳಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post