ಎಸ್.ಎಸ್.ಎಲ್ಸಿಯಲ್ಲಿ ತೀರ್ಥಹಳ್ಳಿಗೆ ದ್ವಿತೀಯ ಸ್ಥಾನ ಪಡೆದ ಅಭಿಜ್ಞಾ
2025-26 ಸಾಲಿನ ಎಸ್.ಸ್.ಎಲ್.ಸಿ. ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಬಾರದ ಕಾರಣ ಮರುಪರೀಕ್ಷೆ ಬರೆದ ತಾಲೂಕಿನ ಚಿಟ್ಟೆಬಯಲು ಪ್ರಜ್ಞಾಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅಭಿಜ್ಞಾ ಆರ್. ಕಶ್ಯಪ್ 618 ಅಂಕ ಪಡೆದು ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ.
ಈ ವಿಧ್ಯಾರ್ಥಿನಿ ಮಾರ್ಚ್ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ 578 ಅಂಕ ಪಡೆದಿದ್ದಳು. ನಂತರ ಮರುಮೌಲ್ಯಮಾಪನದಲ್ಲಿ 603 ಅಂಕ ಪಡೆದಳು. ಮತ್ತೆ ಮೇ ತಿಂಗಳಲ್ಲಿ ಮರುಪರೀಕ್ಷೆ ಬರೆದು 618 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್ ಜೊತೆಗೆ ತೀರ್ಥಹಳ್ಳಿ ತಾಲೂಕಿಗೆ ಎರಡನೇ ರ್ಯಾಂಕ್ ಗಿಟ್ಟಿಸಿಕೊಂಡಿದ್ದಾಳೆ.
ಅಭಿಜ್ಞಾ ಅರಳಾಪುರ ಸಮೀಪದ ಕರಿಮನೆ ಕೆ.ಎಂ. ರಾಘವೇಂದ್ರ, ಶೋಭಿತಾ ದಂಪತಿಗಳ ಪುತ್ರಿ.