ವಿವಿಧ ಬೇಡಿಕೆ ಮುಂದಿಟ್ಟ ಜನ್ಮ ಶತಮಾನೋತ್ಸವ ಸಮಿತಿ
ಸಮಾಜವಾದಿ ಹೋರಾಟಗಾರ
ಶಾಂತವೇರಿ ಗೋಪಾಲಗೌಡರ ಹುಟ್ಟೂರು ಆರಗ ಮತ್ತು ಹೋರಾಟ ಭೂಮಿ ಸಾಗರದ ಕಾಗೋಡಿನಲ್ಲಿ ಗೋಪಾಲಗೌಡರ ಸ್ಮಾರಕ
ಸ್ಥಾಪಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಭೇಟಿಯಾಗಿ ಒತ್ತಾಯಿಸಿತು.
ಬಜೆಟ್ನಲ್ಲಿ ವಿಕ್ಟೋರಿಯಾ
ಆಸ್ಪತ್ರೆಗೆ ಮರುನಾಮಕರಣ ಮಾಡಿರುವ ಕುರಿತು ಸಮಿತಿ ಉಪ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಇದೇ
ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.
ವಿಧಾನಸೌಧದ ಮುಂಭಾಗದ
ಶಾಂತವೇರಿ ಗೋಪಾಲಗೌಡ ವೃತ್ತದಲ್ಲಿ ಅವರ ಆಳೆತ್ತರದ ಪ್ರತಿಮೆ ಸ್ಥಾಪಿಸಬೇಕು. ಬೆಂಗಳೂರಿನಲ್ಲಿ ಸ್ಮಾರಕ
ಭವನ ಕಟ್ಟಲು ನಿವೇಶನ ಮಂಜೂರು ಮಾಡಬೇಕು. ಅವರ ಜೀವನದ ಕುರಿತು ಪಠ್ಯ ಪುಸ್ತಕದಲ್ಲಿ ಪಾಠ ಒದಗಿಸಬೇಕು
ಎಂದು ಮನವಿ ಸಲ್ಲಿಸಿದರು.
ಪ್ರತಿಷ್ಠಾನದ ಅಧ್ಯಕ್ಷ,
ಶಾಸಕ ಆರಗ ಜ್ಞಾನೇಂದ್ರ, ಉಪಾಧ್ಯಕ್ಷರು ಜಿ.ಎ. ಪುರುಷೋತ್ತಮ ಗೌಡ, ಕಾರ್ಯದರ್ಶಿ ರಾಮಮನೋಹರ ಶಾಂತವೇರಿ,
ಸದಸ್ಯರಾದ ಮಣಿ ಹೆಗ್ಡೆ, ರಾಜಣ್ಣ, ಆಶಾ ಬಾಲರಾಜ್, ಇಳಿಮನೆ ವನಮಾಲಯ್ಯ (ಉಮೇಶ್) ಮತ್ತಿತರರು ಇದ್ದರು.
