ಕಾಂಗ್ರೆಸ್ ಬಾವುಟ ಹಿಡಿದ ಮೇಲಿನಕುರುವಳ್ಳಿ ದೇವರಾಜ್ ಎಸ್
ಪಕ್ಷಕ್ಕೆ ಬರ ಮಾಡಿಕೊಂಡ ಸಚಿವ ಮಧುಬಂಗಾರಪ್ಪ
ದೇವರಾಜ್ ಎಂದರೆ ವ್ಯಕ್ತಿಯಲ್ಲ ಶಕ್ತಿ
ಮೇಲಿನಕುರುವಳ್ಳಿಯ ಬಿಜೆಪಿ ಸಂಘಟಕನಾಗಿ ಗುರುತಿಸಿಕೊಂಡಿದ್ದ ಐಪಿಎಸ್ ದೇವರಾಜ್ ಎಂದೇ ಸ್ನೇಹಿತರ ವಲಯದಲ್ಲಿ ಪ್ರಸಿದ್ಧರಾಗಿರುವ ಯುವ ಮುಖಂಡ ದೇವರಾಜ್ ಎಸ್. ಕಾಂಗ್ರೆಸ್ ಪಕ್ಷಕ್ಕೆ ಶನಿವಾರ ಅಧಿಕೃತವಾಗಿ ಸೇರ್ಪಡೆಗೊಂಡರು.
ಸುಮಾರು 12, 13 ವರ್ಷಗಳ ಹಿಂದೆ ಕಾಂಗ್ರೆಸ್ ಮತದಾರರ ಬೂತ್ ಆಗಿದ್ದ ಮೇಲಿನಕುರುವಳ್ಳಿಯನ್ನು ಸಂಘಟನೆಯ ಚಾತುರ್ಯದಿಂದ ಬಿಜೆಪಿ ಬೂತ್ ಆಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೇವರಾಜ್ ಕೇವಲ 6 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ನಿರಂತರವಾಗಿ ಜನರೊಂದಿಗೆ ಸಂಪರ್ಕ ಹೊಂದಿರುವ ಅವರು ಕೆಲವು ಸಂದರ್ಭಗಳಲ್ಲಿ ಆಪತ್ಬಾಂದವನಂತೆ ಸೇವೆ ಸಲ್ಲಿಸುತ್ತಾರೆ.
ಬಿಜೆಪಿ ಪಕ್ಷಕ್ಕಿಂತಲೂ ಮುಖ್ಯವಾಗಿ ಆರ್ ಎಸ್ ಎಸ್ ವಲಯದಲ್ಲಿ ಗುರುತಿಸಿಕೊಂಡಿದ್ದ ದೇವರಾಜ್ ಅನೇಕ ವರ್ಷಗಳಿಂದ ಶಾಖೆಗಳನ್ನು ನಿರಂತವಾಗಿ ನಡೆಸಿಕೊಂಡು ಬಂದಿದ್ದರು. ಇಂದಿಗೂ ಈ ಭಾಗದಲ್ಲಿ ದೇವರಾಜ್ ಎಂದರೆ ವ್ಯಕ್ತಿಯಲ್ಲ ಶಕ್ತಿ ಎಂದೇ ಹೇಳಲಾಗುತ್ತದೆ. ತಮಗೆ ವಹಿಸಿದ ಕೆಲಸವನ್ನು ಚಾಚೂತಪ್ಪದೆ ನಿಭಾಯಿಸಿಕೊಂಡು ಬರುವ ಅವರು ತಮ್ಮ ಕೆಲಸಗಳಿಗೆ ಪ್ರಚಾರವನ್ನು ಅಪೇಕ್ಷಿಸುವುದಿಲ್ಲ. ಗೆರಿಲ್ಲಾ ವಾರ್ ಮಾದರಿಯಲ್ಲಿ ಪಕ್ಷವನ್ನಿ ಸದೃಢವಾಗಿ ಕಟ್ಟುತ್ತಿದ್ದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹೆಚ್ ಎಸ್ ಮಂಜುನಾಥ್ ಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ , ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊರಬೈಲು ಪ್ರಭಾಕರ್ ಸೇರಿದಂತೆ ಪಂಚಾಯಿತಿ ಸದಸ್ಯರು, ಮುಖಂಡರು ಈ ವೇಳೆ ಇದ್ದರು.