ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಂದ ಶುಭ ಹಾರೈಕೆ
ರಾಜ್ಯದ ಕರ್ನಾಟಕ ಜವಳಿ ಮತ್ತು ವಿದ್ಯುತ್ ಕೈಮಗ್ಗ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶಿವಮೊಗ್ಗದ ಚೇತನ್ ಗೌಡ ಈಚೆಗೆ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ಕಟ್ಟಾಳುವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಅವರು ಸಾಕಷ್ಟು ಸಂಘನೆಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಎನ್ಎಸ್ಯುಐ, ಯುವ ಕಾಂಗ್ರೆಸ್ ಜವಾಬ್ದಾರಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದ ಅವರು ಜಿಲ್ಲೆಯಾದ್ಯಂತ ನಿಕಟ ಸಂಪರ್ಕ ಹೊಂದಿದ್ದಾರೆ. ಅಲ್ಲದೇ ಯುವ ಸಮುದಾಯಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ತಮ್ಮ ವಿವೇಚನ ಶಕ್ತಿಯ ಮೂಲಕ ಅಧಿಕಾರಯುತವಾಗಿ ನ್ಯಾಯ ಕೊಡಿಸುವಲ್ಲಿ ಯಶಸ್ವಿ ಪಾತ್ರ ನಿರ್ವಹಿಸಿದ್ದರು.
ನಿರಂತರ ಹೋರಾಟದ
ಹಾದಿಯಲ್ಲಿ ಗುರುತಿಸಿಕೊಂಡಿದರುವ ಅವರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಸಂಘಟನೆಯ ಜೊತೆಗೆ ಬಿ.ವಿ.ಶ್ರೀನಿವಾಸ್ ಅವರ ಅತ್ಯಾಪ್ತರಾಗಿರುವ ಅವರು ಅನೇಕ ಸೌಲತ್ತುಗಳನ್ನು ಕೊಡಿಸುವಲ್ಲಿ
ಪ್ರಮುಖ ಪಾತ್ರ ವಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್
ಸಂಘಟನಾ ಕಾರ್ಯದರ್ಶಿ ಅಮ್ರಪಾಲಿ ಸುರೇಶ್, ರಾಜ್ಯ ಕೆಪಿಸಿಸಿ ನೀತಿ, ಸಂಯೋಜನೆ ಮತ್ತು ತರಬೇತಿ ಘಟಕದ
ಸದಸ್ಯ ಆದರ್ಶ ಹುಂಚದಕಟ್ಟೆ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪೂರ್ಣೇಶ್
ಕೆಳಕೆರೆ, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ರವಿ ಹೊಸ್ಕೆರೆ, ತೀರ್ಥಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್
ಅಧ್ಯಕ್ಷ ಶ್ರೇಯಸ್ ರಾವ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ, ಶೇಡ್ಗಾರು
ಗ್ರಾಮ ಪಂಚಾಯಿತಿ ಸದಸ್ಯ ಪಣಿರಾಜ್ ಕಟ್ಟೇಹಕ್ಕಲು, ಮುಖಂಡರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ,
ಜೈಕರ ಶೆಟ್ಟಿ, ಶಿವು ಹೊದಲ, ಪ್ರೇಮ್ ಯಡೂರು ಶುಭ ಹಾರೈಸಿದ್ದಾರೆ.
