8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
ತೀರ್ಥಹಳ್ಳಿ ತಾಲೂಕು
8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಾಹಿತಿ, ಕವಿ ಅರಳಸುರಳಿಯ ಟಿ.ಎಲ್. ಸುಬ್ರಹ್ಮಣ್ಯ
ಅಡಿಗ (90 ವರ್ಷ) ಶುಕ್ರವಾರ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅಡಿಗರು ಕಥೆ, ಕವನ
ಮತ್ತು ಕಾದಂಬರಿ ಸೇರಿದಂತೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಓರ್ವ ಪುತ್ರ ಹಾಗೂ ಇಬ್ಬರು
ಪುತ್ರಿಯರನ್ನು ಇವರು ಅಗಲಿದ್ದಾರೆ. ಅಡಿಗರ ಅಂತ್ಯ ಸಂಸ್ಕಾರವು ಶನಿವಾರ ಅರಳಸುರಳಿಯಲ್ಲಿ ನಡೆಯಲಿದೆ.
