ಆನೆ ಕಾಲ್ತುಳಿತಕ್ಕೆ
ಇಬ್ಬರು ಬಲಿ
ಪುನರ್ವಸತಿ ಸೌಕರ್ಯಕ್ಕೆ
ಸಲ್ಲಿಸಿದ್ದ ಅರ್ಜಿ ಸರ್ಕಾರ ಪರಿಗಣಿಸಲಿಲ್ಲ
ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಸಮೀಪದ ಕಿಗ್ಗಾ ಹೋಬಳಿ ವ್ಯಾಪ್ತಿಯ ಕೆರೆ ಗ್ರಾಮದ ಸರ್ವೆ ನಂಬರ್ 69ರಲ್ಲಿ ಶುಕ್ರವಾರ ಮುಂಜಾನೆ ಕಾಡಾನೆ ಕಾಲ್ತುಳಿತಕ್ಕೆ ಸಿಲುಕಿ ಇಬ್ಬರು ಗ್ರಾಮಸ್ಥರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು, ತಹಶೀಲ್ದಾರ್ ಭೇಟಿ ನೀಡಿದ್ದಾರೆ. ತಹಶೀಲ್ದಾರ್ ತಡವಾಗಿ ಸ್ಥಳಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಸ್ಥಳೀಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಾರನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಹರೀಶ ಬಿನ್ ಸೀನ ಶೆಟ್ಟಿ (45), ಉಮೇಶ್ ಬಿನ್ ಹಾಲಪ್ಪ ಗೌಡ (49) ಇಬ್ಬರು ಮುಂಜಾನೆ ಜಾನುವಾರು ಕೊಟ್ಟಿಗೆಗೆ ಸೊಪ್ಪು ಸಂಗ್ರಹಿಸಲು ತೆರಳಿದ್ದರು. ಈ ವೇಳೆ ಅಚಾನಕ್ಕಾಗಿ ಕಾಡಾನೆ ದಾಳಿ ನಡೆಸಿದ್ದು ಇಬ್ಬರು ಕೂಡ ಆನೆಯ ಕಾಲಿಗೆ ಸಿಲುಕಿದ್ದಾರೆ. ಗ್ರಾಮದಲ್ಲಿ ಮುಂಜಾನೆಯಿಂದ ನೀರವ ಮೌನ ಆವರಿಸಿದೆ. ಕಾಡಾನೆ ದಾಳಿ ಹಿನ್ನಲೆಯಲ್ಲಿ ಜನರು ಆಕ್ರೋಶಗೊಂಡಿದ್ದಾರೆ. ಸ್ಥಳೀಯರು ಅಧಿಕಾರಿಗಳ ಮೇಲೆ ರೊಚ್ಚಿಗೆದ್ದಿದ್ದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಇಬ್ಬರು ಸರ್ಕಾರಕ್ಕೆ ಪುನರ್ವಸತಿ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರ ಅವರ ಮನವಿಗೆ ಸ್ಪಂದಿಸಿರಲ್ಲ. ಅರಣ್ಯದ ಅಂಚಿನ ಜಾಗವನ್ನು ಬಿಟ್ಟು ಬೇರೆ ಕಡೆಗೆ ಜಾಗ ಕೊಡಿ ಎಂದರು ಕೊಡಲಿಲ್ಲ. ನಾಗರೀಕ ಸರ್ಕಾರವೆನ್ನಲು ಯಾವುದೇ ಭರವಸೆಗಳು ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ.
