ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಸಮೀಪ ಘಟನೆ
Nelada Dwani Exclusive news
ಚಿಕ್ಕಮಗಳೂರು ಜಿಲ್ಲೆಯ ಶಂಗೇರಿ ತಾಲ್ಲೂಕಿನ ಕೆರೆಕಟ್ಟೆ ಸಮೀಪ ಕಾಡಾನೆ ತುಳಿದು ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ.
ಮೃತರನ್ನು ಹರೀಶ್ ಮತ್ತು ಉಮೇಶ್ ಸಹೋದರರು ಎಂದು ಗುರುತಿಸಲಾಗಿದ್ದು ಮೃತರ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರ ಬೀಳಬೇಕಿದೆ. ಆಗುಂಬೆ ಭಾಗದಲ್ಲಿ ಸಂಚರಿಸುತ್ತಿದ್ದ ಕಾಡಾನೆ ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು ಆನೆಯ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಕಾಡಾನೆ ತುಳಿದು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಆದರೆ ಶೃಂಗೇರಿ ಭಾಗದಿಂದ ಬೇರೆ ಆನೆಯೊಂದು ಬಂದಿದೆಯೋ ಅಥವಾ ಆಗುಂಬೆಯಲ್ಲಿ ಮೂರು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಒಂಟಿ ಆನೆಯೆ ಕೆರೆಕಟ್ಟೆ ಮಾರ್ಗದಲ್ಲಿ ಹಿಂದಿರುಗಿದೆಯಾ ಎಂಬ ಬಗ್ಗೆ ಖಚಿತ ಮಾಹಿತಿಗಳು ಹೊರಬೀಳಬೇಕಿದೆ. ಸುಮಾರು 15 ವರ್ಷಗಳಿಗೂ ಹೆಚ್ಚುಕಾಲ ಆಗುಂಬೆಯಲ್ಲಿ ಸಂಚರಿಸುತ್ತಿದ್ದ ಕಾಡಾನೆ ಆಗಿದ್ದರೆ ಇದು ಹಲವು ವರ್ಷಗಳ ನಂತರ ನಡೆದ ಕಾಲ್ತುಳಿತ ಆಗಿ ಕಾಣಿಸಿಕೊಳ್ಳಲಿದೆ. ಮಲ್ಲಂದೂರಿನಲ್ಲಿ ಹಿಂದೊಮ್ಮೆ ನಡೆದಿದೆ ಎನ್ನಲಾದ ಕಾಡಾನೆ ತುಳಿತದ ಬಳಿಕ ಇಂತಹ ವರದಿಗಳು ಬಂದಿರಲಿಲ್ಲ. ಇದೀಗ ಕೆರೆಕಟ್ಟೆ ಸಮೀಪ ಸಂಭವಿಸಿದ್ದು ಎರಡನೆಯ ಘಟನೆಯಾಗಿ ಕಾಣಿಸಿಕೊಳ್ಳಲಿದೆ. ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ದೌಡಾಯಿಸಿದ್ದು ಘಟನೆಯ ಕುರಿತು ಅರಣ್ಯ ಇಲಾಖೆಯಿಂದ ಖಚಿತ ಮಾಹಿತಿ ಹೊರ ಬೀಳಬೇಕಿದೆ.