ಸುಳುಗೋಡು ಗ್ರಾಮದ ರಾಮಣ್ಣ ಗೌಡ ಆತ್ಮಹತ್ಯೆ
ಹೊಸನಗರ ತಾಲೂಕು ಸುಳಗೋಡು ಗ್ರಾಮ ಪಂಚಾಯತ್ (ಯಡೂರು) ಕಾನುಗೋಡು ರಾಮಣ್ಣ ಗೌಡ (65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಾನು ಅತ್ಯಂತ ಶ್ರಮ ವಹಿಸಿ ಮಾಡಿದ್ದ ಸುಮಾರು 2 ಎಕರೆ ಅಡಿಕೆ ತೋಟ ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿ ಸರ್ವ ನಾಶವಾಗಿದ್ದು ನೋಡಿ ಮನ ನೊಂದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇವರ ಪತ್ನಿ ಕಳೆದ 3 ತಿಂಗಳ ಹಿಂದೆ ಅನಾರೋಗ್ಯ ದಿಂದ ಸಾವನ್ನಪ್ಪಿದ್ದರು.. ಇವರು ಪುತ್ರ, ಒಬ್ಬಳು ಪುತ್ರಿ ಹಾಗೂ ಸೊಸೆಯನ್ನು ಬಿಟ್ಟು ಅಗಲಿದ್ದಾರೆ.
ಸಾಮಾನ್ಯವಾಗಿ ಈ ವರ್ಷ ಅತೀ ಹೆಚ್ಚು ಮಳೆಯಿಂದ ನಗರ ಹೋಬಳಿ ಭಾಗದ ಸುಮಾರು 80% ಅಡಿಕೆ ಕೊಳೆ ರೋಗ ಮತ್ತು ಎಲೆಚುಕ್ಕಿ ರೋಗದಿಂದ ನಾಶವಾಗಿದ್ದು ರೈತರ ಗೋಳು ಕೇಳುವವರಿಲ್ಲದಾಗಿದೆ.
ಜನಪ್ರತಿನಿದಿಗಳು ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಿ ಈ ಭಾಗದ ಜನರಿಗೆ ವಿಶೇಷ ಪ್ಯಾಕೇಜ್ ನೀಡುವ ಕೆಲಸ ಮಾಡಿದರೆ ಈ ಭಾಗದ ರೈತರು ಜೀವಂತ ಉಳಿಯಬಹುದು.
ಆತ್ಮಹತ್ಯೆ ಮಾಡಿಕೊಂಡ ರಾಮಣ್ಣ ಗೌಡರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂಬುದು ನಮ್ಮೆಲ್ಲರ ಓತ್ತಾಸೆ.
ವರದಿ ; ಹೆಚ್. ವಾಸಪ್ಪ, ಮಾಸ್ತಿಕಟ್ಟೆ