ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಆರಗ ಜ್ಞಾನೇಂದ್ರ
ಅಂದಾಜು 6 ಲಕ್ಷ ವೆಚ್ಚದ ಕ್ರೀಡಾಕೂಟದ ಮುಂದಾಳತ್ವ ವಹಿಸಿದ ಸ್ಥಳೀಯರು
ತೀರ್ಥಹಳ್ಳಿ ತಾಲೂಕ ಮಟ್ಟದ 17 ವರ್ಷ ವಯೋಮಿತಿ ಒಳಗಿನ ಬಾಲಕ, ಬಾಲಕಿಯರ ಅಥ್ಲೆಟಿಕ್ಟಿ ಕ್ರೀಡಾಕೂಟ ಮಾಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರಿಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಆರಗ ಜ್ನಾನೇಂದ್ರ ರಾಜಕಾರಣದಲ್ಲಿ ಸೋಲನ್ನು ಕ್ರೀಡಾಸ್ಪೂರ್ತಿಯಿಂದ ಎದುರಿಸಬೇಕೆಂದು ಹೇಳುತ್ತಾರೆ. ಇದರರ್ಥ ಸೋಲು ಗೆಲುವಿನ ಸೋಪಾನ ಎಂದು ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಆಗುವುದಿಲ್ಲ. ಗೆಲ್ಲಲು ನಿರಂತರ ಪರಿಶ್ರಮ, ತಾಳ್ಮೆ ಅಗತ್ಯ ಆದರೆ ಕ್ರೀಡೆಯಲ್ಲಿ ರಾಜಕಾರಣ ಸಲ್ಲದು ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಶೋಕಮೂರ್ತಿ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯನ್ನು ಜನ ಸಂಭ್ರಮಿಸುತ್ತಾರೆ ಎನ್ನುವುದಕ್ಕೆ ಮಾಳೂರಿನಲ್ಲಿ ಆಯೋಜನೆಗೊಂಡಿರುವ ಕ್ರೀಡಾಕೂಟ ಸಾಕ್ಷಿ. ಬಹುತೇಕ ಸ್ಥಳೀಯ ದಾನಿಗಳು ಇಡೀ ಕ್ರೀಡಾಕೂಟವನ್ನು ಪ್ರಾಯೋಜಿಸಿದ್ದಾರೆ. ಇಂತಹ ವಾತಾವರಣ ಎಲ್ಲ ಕಡೆ ನಿರ್ಮಾಣವಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಜ್ಜವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್, ಉಪಾಧ್ಯಕ್ಷ ಸುಬ್ರಮಣ್ಯ ಶೆಟ್ಟಿ, ಸದಸ್ಯ ಹರೀಶ್ ಮೇಲಿನಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಗಿರಿರಾಜ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಮು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ, ಪ್ರಾಂಶುಪಾಲ ಶಿವಕುಮರ್, ಸ್ವಾಗತ ಸಮಿತಿ ಉಪಾಧ್ಯಕ್ಷ ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು
ಹಿರಿಯ ಸಹ ಶಿಕ್ಷಕಿ ನಿಶಾ ಕಾನೇಟಕರ ಸ್ವಾಗತಿಸಿದರು. 48 ಶಾಲೆಗಳ ಬಾಲಕ, ಬಾಲಕಿಯರು ಕ್ರಿಡಾಕೂಟದಲ್ಲಿ ಸ್ಪರ್ಧಿಸಿದ್ದಾರೆ
