ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೀಗರು
ತೂದೂರು ಸೇತುವೆ ನಿರ್ಮಾಣದ ಕಾರಣೀಕರ್ತ
ಸ್ನೇಹಜೀವಿ, ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಹೊಸಹಳ್ಳಿ ಮಂಜಪ್ಪ ಶಾಮಯ್ಯ ಗೌಡ (96) ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಹೆದ್ದೂರಿನ ಹೊಸಹಳ್ಳಿ ಮೂಲದವರಾಗಿದ್ದ ಅವರು ಬಹಳ ವರ್ಷಗಳ ಹಿಂದೆಯೇ ತೂದೂರಿಗೆ ಬಂದು ನೆಲೆ ನಿಂತಿದ್ದರು.
ಈಗಿರುವ ಮುಡುಬ ಸೇತುವೆಯನ್ನು ತಮ್ಮ ಪ್ರಭಾವ ಬಳಸಿ ತೂದೂರಿಗೆ ತರುವ ಪ್ರಯತ್ನವನ್ನು ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಕಾರಣದಿಂದ ಅಂದು ತೂದೂರಿಗೆ ಸೇತುವೆ ಸಿಗದೆ ಹೋಗಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೀಗರಾಗಿದ್ದ ಅವರು 2022ರಲ್ಲಿ ತೂದೂರಿಗೆ ಸೇತುವೆ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಅದರ ಪ್ರಯತ್ನದ ಫಲವಾಗಿ ಬಸವರಾಜ ಬೊಮ್ಮಾಯಿ ತೂದೂರಿಗೆ ಸೇತುವೆ ಮಂಜೂರು ಮಾಡಿಸಿದ್ದಾರೆ.
ಅವರಿಗೆ ಆರು ಹೆಣ್ಣು ಮಕ್ಕಳು ಇದ್ದಾರೆ. ಅಂತ್ಯಕ್ರಿಯೆ ಸೋಮವಾರ ತೂದೂರಿನಲ್ಲಿ ನಡೆಯಲಿದೆ.