ಟೀಂ ಈಶ್ವರ ಮಲ್ಪೆ
ಸಹಯೋಗ
ಉಚಿತ ಕಿವಿ ತಪಾಸಣೆ,
ಶ್ರವಣ ಯಂತ್ರ ಸಹಾಯಧನ ವಿತರಣೆ ಸೆ.29ಕ್ಕೆ
ಸೆಪ್ಟೆಂಬರ್
29ರ ಸೋಮವಾರ ತಾಲ್ಲೂಕಿನ ತುಂಗಾ ಸೇತುವೆ ಸಮೀಪದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್, ತಾಲ್ಲೂಕು
ಕಾರ್ಯನಿರತರ ಪತ್ರಕರ್ತರ ಸಂಘ ನೇತೃತ್ವದಲ್ಲಿ ಟೀಂ ಈಶ್ವರ್ ಮಲ್ಪೆ ಸಹಯೋಗದಲ್ಲಿ ಉಚಿತ ಕಿವಿಯ ಶ್ರವಣ
ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ
5 ಗಂಟೆಯ ವರೆಗೆ ಶಿಬಿರ ಏರ್ಪಾಡಾಗಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ
ಶ್ರೀಕಾಂತ್ ಭಟ್ ವಹಿಸಲಿದ್ದು ಅತಿಥಿಗಳಾಗಿ ಈಶ್ವರ್ ಮಲ್ಪೆ, ಶ್ರವಣ ತಜ್ಞ ಡಾ.ಪವನ್, ಕಾರ್ಯನಿರತ
ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಿಂಗರಾಜು, ಶಿಬಿರದ
ಸಂಚಾಲಕ ಲವ ಬಂಗೇರ, ಪತ್ರಕರ್ತರ ಸಂಘದ ಕಾರ್ಯದರ್ಶಿ ಕೋಣಂದೂರು ಮುರುಘರಾಜ್ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸುವವರು ಮೊಬೈಲ್ ಸಂಖ್ಯೆ 9901062533, 9902344399, 9901184244,
9481179490 ಸಂಪರ್ಕಿಸಬಹುದಾಗಿದೆ.