ಕೋಣಂದೂರು ಸಮೀಪ
ಆನೆಗಳ ಓಡಾಟ
ಪಟಾಕಿ, ಬೆಂಕೆ,
ಜನರ ಕೇಕೆಗೆ ಬೆದರಿದ ಆನೆಗಳು
ತೀರ್ಥಹಳ್ಳಿ ಪಟ್ಟಣಕ್ಕೆ
ಆಗಮಿಸಿದ್ದ ಎರಡು ಕಾಡಾನೆಗಳು ಮಂಗಳವಾರ ರಾತ್ರಿ ಕೋಣದೂರು ಕಡೆಗೆ ಸಂಚರಿಸಿವೆ. ರಾತ್ರಿ ಕೌದಳ್ಳಿ
ಮಾರ್ಗವಾಗಿ ಓಡಾಟ ನಡೆಸುವ ವೇಳೆ ಸ್ಥಳೀಯರು ಬೆಂಕಿ, ಪಟಾಕಿಗಳನ್ನು ವಿಪರೀತ ಪ್ರಮಾಣದಲ್ಲಿ ಬಳಕೆ ಮಾಡಿದ್ದರಿಂದ
ಆರಗದ ಕಡೆಗೆ ಚಲಿಸಬೇಕಿದ್ದ ಆನೆಗಳು ಹೆದರಿ ದಿಕ್ಕಾಪಾಲಾಗಿ ಓಡಿವೆ ಎಂದು ತಿಳಿದು ಬಂದಿದೆ.
ಬುಧವಾರ ಕಂಬಳಿಗೆರೆ,
ಮಲ್ಲಿಕಟ್ಟೆ ಭಾಗದಲ್ಲಿ ಓಡಾಟ ನಡೆಸಿ ಹಲುಸಾಲೆಯ ತೋಟಗಳನ್ನು ಹಾಳು ಮಾಡಿದೆ. ಉಡುಕೇರಿ, ಹಲುಸಾಲೆಯ
ಕಾಡುಗಳಲ್ಲಿ ಆನೆ ಇದ್ದು ಸ್ಥಳೀಯರು ಓಟಾಡ ಮಾಡದಂತೆ ಎಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ರಾತ್ರಿ
ಯಾವ ಕಡೆಗೆ ಆನೆಗಳು ಸೇರಲಿವೆ ಎಂಬ ಬಗ್ಗೆ ಸ್ಥಳೀಯವಾಗಿ ಹಲವು ಕುತೂಹಲಗಳು ಇದ್ದು ಅರಣ್ಯ ಇಲಾಖೆಗೂ
ಇದು ತಲೆನೋವಾಗಿ ಪರಿಣಮಿಸಿದೆ.



