ಕರ್ನಾಟಕ ರಾಜ್ಯ
ಔಷಧ ತಯಾರಕ ಸಂಘಕ್ಕೆ ಆಯ್ಕೆ
ಪ್ರತಿಭಾವಂತ ಉದ್ಯಮಿಗೆ ಒಲಿದ ಪ್ರತಿಷ್ಟಿತ ಗೌರವ
ಕರ್ನಾಟಕ ರಾಜ್ಯ
ಔಷಧ ತಯಾರಕರ ಸಂಘದ ಗೌರವ ಕಾರ್ಯದರ್ಶಿಯಾಗಿ ಬಾಳಗಾರು ಶ್ರೀಧರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ದಕ್ಷಿಣ
ಭಾರತದ ಪ್ರಮುಖ ಔಷಧ ತಯಾರಿಕ ಕಂಪನಿಯಲ್ಲಿ ಒಂದೆನಿಸಿರುವ ನೇಮಸ್ ಫಾರ್ಮಸ್ಯೂಟಿಕಲ್ ವ್ಯವಸ್ಥಾಪಕ
ನಿರ್ದೇಶಕನಾಗಿರುವ ಶ್ರೀಧರ್ ಶೆಟ್ಟಿ ಈ ಹಿಂದೆ ಎನ್.ಕೆ.ಡಿ.ಪಿ.ಎಂ.ಎ. ಗೌರವ ಕಾರ್ಯದರ್ಶಿಯಾಗಿ ಸೇವೆ
ಸಲ್ಲಿಸಿದ್ದಾರೆ.
ಮೂಲತಃ ಬಾಳಗಾರಿನವರಾದ
ಶ್ರೀಧರ್ ಶೆಟ್ಟಿ ಪದವಿ ಶಿಕ್ಷಣ ಪೂರೈಸಿದ ನಂತರ ಔಷಧ ತಯಾರಿಕ ಕಂಪನಿಗಳಲ್ಲಿ ಚಿಕ್ಕ ಹುದ್ದೆಯಿಂದ ಸೇವೆ ಆರಂಭಿಸಿ ಹಂತ ಹಂತವಾಗಿ ಮೇಲೇರಿ ಈಗ ತಮ್ಮದೇ ಸ್ವಂತ ಕಂಪನಿಯನ್ನು ಆರಂಭಿಸಿದ ದಕ್ಷ ಹಾಗೂ ಛಲವಂತ
ಉದ್ಯಮಿಯಾಗಿದ್ದಾರೆ. ಇದರ ಜೊತೆಗೆ ಊರಿನ ಯುವ ಜನತೆಯ ಕುರಿತು ವಿಶೇಷ ಕಾಳಜಿಯುಳ್ಳ ಶ್ರೀಧರ್ ಶೆಟ್ಟಿ
ಈ ಭಾಗದ ಪದವೀಧರ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕಂಪನಿಯಲ್ಲಿ ಉದ್ಯೋಗದ ಅವಕಾಶ ಕಲ್ಪಿಸುವ
ಮೂಲಕ ನೆರವಾಗಿದ್ದಾರೆ.
ಶ್ರೀಧರ್ ಶೆಟ್ಟಿ ಅವರಿಗೆ ತುಳುನಾಡು ಸಿರಿ ಸೌಹಾರ್ಧ ಸಹಕಾರಿ ಅಧ್ಯಕ್ಷ ಬಿ.ಆರ್.ರಾಘವೇಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡ, ಗ್ರಾಮಾಂತರ ಕಾಂಗ್ರೆಸ್ ಉಪಾಧ್ಯಕ್ಷ ಕುಡುಮಲ್ಲಿಗೆ ರಮೇಶ್ ಶೆಟ್ಟಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.
