ಮೂವರು ಕೌನ್ಸಿಲಿಂಗ್, ಇಬ್ಬರು ವರ್ಗಾವಣೆ
ತೀರ್ಥಹಳ್ಳಿ ತಾಲ್ಲೂಕು ಜೆ.ಸಿ. ಆಸ್ಪತ್ರೆಗೆ 5 ಹೊಸ ವೈದ್ಯರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ಮೂವರು ವೈದ್ಯರು ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದು ಇಬ್ಬರನ್ನು ವರ್ಗಾವಣೆಯ ಮೂಲಕ ನೇಮಕಗೊಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇದರ ಆಯುಕ್ತ ಶಿವಕುಮಾರ ಕೆ.ಬಿ. ಜುಲೈ 7ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.
5 ಹೊಸ ವೈದ್ಯರು ಯಾರ್ಯಾರು...?
1) ದಂತ ತಜ್ಞ- ಡಾ. ಕೆ ನಾಗೇಶ್ ಕುಮಾರ್ ( ಮೈಸೂರು ಇಂದ ಕೌನ್ಸಿಲಿಂಗ್ ಮೂಲಕ)
2) ಮಕ್ಕಳ ತಜ್ಞರು- ಡಾ. ಸುಪ್ರೀತ್ ( ಅನವಟ್ಟಿಯಿಂದ ವರ್ಗಾವಣೆ )
3) ಅರವಳಿಕೆ ತಜ್ಞರು
- ಡಾ.ವಿನಯ್ ( ಹೊಳಲೂರುನಿಂದ ವರ್ಗಾವಣೆ )
4) ಇ.ಏನ್.ಟಿ ತಜ್ಞರು
- ಡಾ. ಕವಿತಾ ( ಭದ್ರಾವತಿ ಇಂದ ಕೌನ್ಸಿಲಿಂಗ್ ಮೂಲಕ)
5) ಮೂಳೆ ತಜ್ಞರು
- ಡಾ.ಗಣೇಶ್ ನಾಯಕ್ ( ಉಡುಪಿ ಇಂದ ಕೌನ್ಸಿಲಿಂಗ್ ಮೂಲಕ)
ಈಗಿರುವ ವೈದ್ಯರು ಆಸ್ಪತ್ರೆಯ ಹುದ್ದೆಯಿಂದ ಬಿಡುಗಡೆಯಾಗುವುದು ಮತ್ತು ಹೊಸ ವೈದ್ಯರು ಅಧಿಕಾರ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದ್ದು ಇನ್ನೊಂದು ವಾರ ಜನ ಸಾಮಾನ್ಯರ ಚಿಕಿತ್ಸಾ ವೇಳಪಟ್ಟಿಯಲ್ಲಿ ಏರುಪೇರಾಗಲಿದೆ.

