ರಾಘವೇಂದ್ರ ಎಸ್.ಡಿ. ಅಧ್ಯಕ್ಷರಾಗಿ ಆಯ್ಕೆ
ತೀರ್ಥಹಳ್ಳಿ ತಾಲ್ಲೂಕಿನ
ಮೇಲಿನಕುರುವಳ್ಳಿಯಲ್ಲಿ 2025ನೇ ಸಾಲಿನ ಗಣೇಶೋತ್ಸವ ಅದ್ದೂರಿಯಾಗಿ ಆಚರಿಸಲು ವಿದ್ಯಾಗಣಪತಿ ಸೇವಾ
ಸಮಿತಿ ನಿರ್ಧರಿಸಿದೆ. 28ನೇ ವರ್ಷದ ಗಣೇಶೋತ್ಸವ ಆಚರಣೆಗೆ ಸಿದ್ದತೆ ಆರಂಭವಾಗಿದ್ದು ಅಧ್ಯಕ್ಷರಾಗಿ
ರಾಘವೇಂದ್ರ ಎಸ್.ಡಿ. ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ಪೂಜಾರಿ, ಹಿರಿಯರಾದ ಪುಂಡಲೀಕ ಪೈ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಸಂತೋಷ್, ನವೀನ್, ಕಾರ್ಯದರ್ಶಿಯಾಗಿ ಮನು ಎನ್, ನಂದನ್ ಕೆ ಸೇವೆ ಸಲ್ಲಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಮನೋರಂಜನಾ ಕಾರ್ಯಕ್ರಮ ನಡೆಸಲು ಸಮಿತಿ ಸಿದ್ದಗೊಂಡಿದ್ದು ಕಾರ್ಯಕ್ರಮ ನೀಡುವವರು 10 ದಿನಗಳೊಳಗಾಗಿ ಸಮಿತಿಯವನ್ನು ಸಂಪರ್ಕಿಸುವಂತೆ ರಾಘವೇಂದ್ರ ಎಸ್.ಡಿ. ಕೋರಿದ್ದಾರೆ.

.webp)
.webp)
