ಲೇಖಕ ಶಿವಾನಂದ ಕರ್ಕಿ ಅವರ ಪುಸ್ತಕ
ಧ್ವನಿ ಪ್ರಕಾಶನ ಪ್ರಕಟಿಸಿರುವ ಕಲಾತ್ಮಕ ಶೈಲಿಯ ಲೇಖಕ, ಹಿರಿಯ ಪತ್ರಕರ್ತ ಶಿವಾನಂದ ಕರ್ಕಿ ರಚನೆಯ ಪ್ರವಾಸ ಕಥನ 'ಗಿರಗಿಟ್ಲೆ' ಇಂದು ಸಂಜೆ ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಬಿಡುಗಡೆಯಾಗಲಿದೆ.
ಪುಸ್ತಕವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಕನ್ನಡ ಸಹಪ್ರಾಧ್ಯಾಪಕಿ ಭಾರತಿ ದೇವಿ ಪಿ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಸಾಹಿತಿ ನೆಂಪೆ ದೇವರಾಜ್ ವಹಿಸಲಿದ್ದಾರೆ.
ಶಿವಾನಂದ ಕರ್ಕಿ ಸಾಹಿತ್ಯ ವಲಯದಲ್ಲಿ ಮಲೆನಾಡ ವಿವರಗಳನ್ನು ಅತ್ಯಂತ ಕಲಾತ್ಮಕ ಶೈಲಿಯಲ್ಲಿ ಕಟ್ಟಿ ಕೊಡಬಲ್ಲ ಲೇಖಕ ಎಂದೇ ಹೆಸರು ಮಾಡಿದವರು. ಅವರ ಬಿಡಿ ಬರಹಗಳ ಮೊದಲ ಕೃತಿ ಖಾನೇಷುಮಾರಿ ಹಾಗೂ ಎರಡನೇ ಕೃತಿ "ಗರ್ಕು " ಈಗಾಗಲೇ ಜನಪ್ರಿಯತೆಗಳಿಸಿವೆ.
