ರಘುನಾಥ್ ಎಸ್. ಮತ್ತು ರಘುರಾಮ್ ಎನ್.ಎಂ. ಗೆಲ್ಲಿಸಿ
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಸಹಾಯ,ಯುವಕರು ಹಾಗೂ ಮಹಿಳೆಯರು ಸೇರಿದಂತೆ ಎಲ್ಲಾ ಸದಸ್ಯರಿಗೂ ಸಮಾನ ಅವಕಾಶ ನೀಡುವ ಧ್ಯೇಯ ನಮ್ಮದಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಘುನಾಥ್ ಎಸ್.ಹೇಳಿದರು.
ತೀರ್ಥಹಳ್ಳಿಯ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯ ಬ್ರಾಹ್ಮಣ ಸಂಘದ ಚಟುವಟಿಕೆಗಳನ್ನು ಜಿಲ್ಲೆ ಹಾಗೂ ತಾಲೂಕುಗಳಿಗೂ ವಿಸ್ತರಿಸುವ ಗುರಿ ನಮ್ಮದು,ಹಾಗೂ ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ,ಜೊತೆಗೆ ಸರ್ಕಾರದ ಯೋಜನೆಗಳನ್ನು ಸಮುದಾಯದವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.ಈ ಚುನಾವಣೆಯಲ್ಲಿ ಸಮುದಾಯದ ಮತದಾರರು ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿ ರಘುರಾಮ್ ಎನ್.ಎಂ.ಮಾತನಾಡಿ ನಮ್ಮ ಪ್ರಮುಖ ಯೋಜನೆಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿದೆ.ಏಪ್ರಿಲ್ 13ರಂದು ಶಿವಮೊಗ್ಗದ ಕೋಟೆ ರಸ್ತೆಯ ವಾಸವಿ ವಿದ್ಯಾಲಯದಲ್ಲಿ ನೆಡೆಯುವ ಚುನಾವಣೆಯ ಮತದಾನ ಕೇಂದ್ರಕ್ಕೆ ಸಮುದಾಯದ ಮತದಾರರು ಆಗಮಿಸಿ ನಮಗೆ ಮತ ನೀಡಿ ಗೆಲುವಿನ ರಕ್ಷೆ ನೀಡಬೇಕೆಂದರು.
ಈ ಪತ್ರಿಕಾಗೋಷ್ಟಿಯಲ್ಲಿ ಬ್ರಾಹ್ಮಣ ಮುಖಂಡರಾದ ಆರ್.ಲಕ್ಷ್ಮಿಕಾಂತ್,ಆರ್.ಪ್ರಸನ್ನಕುಮಾರ್,ದತ್ತಾತ್ರಿ,ಶಂಕರ್.ಎ.ಮೋಹನ್ ಭಟ್ ಮುಂತಾದವರಿದ್ದರು.
