ಬೆಳ್ಳಂಬೆಳಗ್ಗೆ ಜಾನುವಾರು ಕಳ್ಳಸಾಗಣೆ

ಸೂತ್ರದಾರನಿಂದಲೇ ಪೊಲೀಸರ ಮೇಲೆ ಒತ್ತಡ
ಮಾಳೂರು ಠಾಣೆಯಲ್ಲಿ ಏನೆಲ್ಲ ನಡೆಯುತ್ತಿದೆ...
ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಮುಂದಾದ ಮಂಡಗದ್ದೆ ಗ್ಯಾಂಗ್
ತೀರ್ಥಹಳ್ಳಿಯ ಮಹಿಷಿ ಸಮೀಪ ತಡರಾತ್ರಿ ಮಠವೊಂದರ ಕಳುವಾಗಿದ್ದು ಸ್ಥಳಕ್ಕೆ ಬೆಳಿಗ್ಗೆ ಪೊಲೀಸರು ತೆರಳುವಾಗ ಜಾನುವಾರು ಕಳ್ಳತನ ಮಾಡುವ ಗ್ಯಾಂಗ್ ಸೆರೆಯಾಗಿದೆ. ಕಳ್ಳತನ ಮಾಡುತ್ತಿರುವ ಗ್ಯಾಂಗ್ ಹಿಡಿಯಲು ಮುಂದಾದ ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಮುಂದಾಗಿರುವ ವಿಶೇಷ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಮಂಡಗದ್ದೆಯ ಜಾನುವಾರು ಕಳ್ಳತನದ ಗ್ಯಾಂಗ್ ಯಾರ ಹೆದರಿಕೆ ಇಲ್ಲದೆ ಗ್ರಾಮೀಣ ಭಾಗದಲ್ಲಿ ನಿತ್ಯ ಜಾನುವಾರು ಕಳ್ಳತನಕ್ಕೆ ಮುಂದಾಗುತ್ತಿದೆ. ಈಚೆಗೆ ಹತ್ತಕ್ಕೂ ಹೆಚ್ಚು ಜಾನುವಾರುಗಳು ಗ್ರಾಮೀಣ ಭಾಗದಲ್ಲಿ ಸರಣಿ ಕಳ್ಳತನವಾಗಿದ್ದು ಪೊಲೀಸರ ಕಣ್ಣು ತಪ್ಪಿಸುವ ಪ್ರಯತ್ನ ಎಗ್ಗಿಲ್ಲದೆ ಸಾಗಿದೆ.
ಮಂಡಗದ್ದೆಯ ದನ ಕಳ್ಳತನ ಗ್ಯಾಂಗ್ ಒಳಗೆ ಕದೀಮರ ಯುವ ಗುಂಪು ಇದೆ. ಈ ಗುಂಪು ನಿತ್ಯ ಕಳ್ಳತನದಲ್ಲಿ ನಿರತವಾಗಿದೆ. ಇದರ ಸೂತ್ರದಾರ ಮಂಡಗದ್ದೆ ಭಾಗದಲ್ಲಿ ಒಬ್ಬ ಇದ್ದು ಆತನೇ ಇದೀಗ ಪೊಲೀಸರ ಮೇಲೆ ರಾಜಕೀಯ ಒತ್ತಡ ಹಾಕಲು ಮುಂದಾಗಿದ್ದಾನೆ. ಬೆಳಿಗ್ಗೆಯಿಂದಲೇ ಪೊಲೀಸ್ ಠಾಣೆಯಲ್ಲಿ ವಾಹನ ಬಿಟ್ಟುಕೊಡುವಂತೆ ಇಲ್ಲಸಲ್ಲದ ನೆಪ, ರಾಜಕೀಯ ಒತ್ತಡಗಳನ್ನು ಹಾಕಲಾಗುತ್ತಿದೆ ಎಂಬ ಸುದ್ದಿ ಹರಡಿದೆ. ಪೊಲೀಸರು ಒತ್ತಡ ಹೇರುತ್ತಿರುವ ಕದೀಮರ ಗ್ಯಾಂಗ್ ಸೂತ್ರದಾರನ್ನೇ ವಿಚಾರಣೆಗೆ ಒಳಪಡಿಸಿದರೆ ದೊಡ್ಡ ಜಾನುವಾರು ಕಳ್ಳ ಸಾಗಾಣೆಯ ಜಾಲ ಪತ್ತೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಪೊಲೀಸರ ವಾಹನ ಮತ್ತು ಸಿಬ್ಬಂದಿಗಳ ಮೇಲೆಯೇ ಜಾನುವಾರು ಕೊಂಡೊಯ್ಯುವ ವಾಹನ ಹತ್ತಿಸಲು ಮುಂದಾಗಿರುವ ಗ್ಯಾಂಗ್ ಸಲೀಸಾಗಿ ಬಿಟ್ಟರೆ ಮುಂದಿನ ದಿನಗಳಲ್ಲಿ ದೊಡ್ಡ ದರೋಡೆ ಗ್ಯಾಂಗ್ ಆಗಿ ಬದಲಾಗುವ ಸಾಧ್ಯತೆ ಇದೆ. ಇವುಗಳಿಗೆ ಅವಕಾಶ ಕೊಡದೆ ದರೋಡೆ ಗ್ಯಾಂಗ್ ಸದೆಬಡೆಯುವ ಅನಿವಾರ್ಯತೆ ಇದ್ದು ಸೂತ್ರದಾರನನ್ನೇ ವಿಚಾರಣೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post