ಫೆಬ್ರವರಿ 17, 18 ರಂದು ಹರಕೆ ಮತ್ತು ಕೆಂಡಕೊಂಡ ಸೇವೆ
ತೀರ್ಥಹಳ್ಳಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ರಂಜದಕಟ್ಟೆಯ ಶ್ರೀ ಚಾಮುಂಡೇಶ್ವರಿ ಶ್ರೀ ಹೊನ್ನತ್ತಮ್ಮ ಶ್ರೀ ಗುಳ್ಳೆ ಮಾರಿಯಮ್ಮ ದೇವಸ್ಥಾನದಲ್ಲಿ ಫ್ರೆಬ್ರವರಿ 17, 18 ರಂದು ವಾರ್ಷಿಕ ಹರಕೆ ಹಾಗೂ ಕೆಂಡಕೊಂಡ ಸೇವೆಯನ್ನು ಏರ್ಪಡಿಸಲಾಗಿದೆ. 17ರ ಸಂಜೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. 18ರ ಮಂಗಳವಾರ ಮಧ್ಯಾಹ್ನ ದೇವರುಗಳ ಪಲ್ಲಿಕ್ಕಿಯು ದೇವಸ್ಥಾನದಿಂದ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಸನ್ನಿಧಿಗೆ ಆಗಮಿಸಿ ರಥಬೀದಿ ಮಾರ್ಗವಾಗಿ ರಾಜಬೀದಿ ಉತ್ಸವದ ಮೂಲಕ ಪುನಃ ಸನ್ನಿಧಿಗೆ ತೆರಳುವುದು. ರಾತ್ರಿ 9.30ಕ್ಕೆ ಸಂಪ್ರದಾಯದಂತೆ ಹರಕೆ ಮತ್ತು ಕೆಂಡಕೊಂಡ ಸೇವೆಯ ಆಚರಣೆ ನಡೆಯಲಿದೆ. ಹಾಗೂ ಅದೇ ದಿನ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.
ಈ ಉತ್ಸವದಲ್ಲಿ ಚೋರಡಿ, ಕಾವಾಸಪುರ, ಹೊಸನಗರ, ಹಿರೇಕೌಂಶಿ, ಅಂಜನಾಪುರ, ಸಮಕಾನಿ, ವಸುವೆ ಮತ್ತು ಇನ್ನಿತರೆ ಕಡೆಗಳಿಂದ ಅಮ್ಮನವರ ಪಲ್ಲಕ್ಕಿಗಳು ಆಗಮಿಸಲಿದೆ. ಕೆಂಡ ಸೇವೆಯು 18 ಅಡಿ ವಿಸ್ತೀರ್ಣದ ಕೊಂಡದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಸರ್ವರನ್ನು ದೇವಸ್ಥಾನ ಸಮಿತಿ ಸ್ವಾಗತಿಸಿದೆ. ಹೆಚ್ಚಿನ ವಿವರಗಳಿಗೆ 9945993631, 9449686584, 9448179490, 9449500912, 9108594745 ಗೆ ಸಂಪರ್ಕಿಸಬಹುದಾಗಿದೆ.

