ಸಿಡಿಮದ್ದು ಸಿಡಿದು ಬಾಲಕನಿಗೆ
ತೀವ್ರ ಗಾಯ
ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್
ಆಸ್ಪತ್ರೆಗೆ ದಾಖಲು
ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಯ
ಅಂಗವಾಗಿ ತೆಪ್ಪೋತ್ಸವ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಸಿಡಿಮದ್ದು ಪ್ರದರ್ಶನ ಬಾಲಕನ ಜೀವಕ್ಕೆ
ಅಪಾಯ ತಂದಿದೆ. ತೀವ್ರ ಗಾಯಗೊಂಡ 9 ವರ್ಷದ ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಮೆಗ್ಗಾನ್ ಆಸ್ಪತ್ರೆಗೆ
ದಾಖಲಿಸಲಾಗಿದೆ.
ತೀರ್ಥಹಳ್ಳಿಯಲ್ಲಿ ಜನವರಿ 1 ರಂದು
ತೆಪ್ಪೋತ್ಸವ ಮತ್ತು ಸಿಡಿಮದ್ದು ಪ್ರದರ್ಶನ ಸುಮಾರು 6 ಲಕ್ಷ ವೆಚ್ಚದಲ್ಲಿ ನಡೆದಿದೆ. ಸಿಡಿಮದ್ದು
ಪ್ರದರ್ಶನದ ನಂತರ ಅರ್ಧ ಸಿಡಿದ ಪಟಾಕಿ ಮತ್ತು ತ್ಯಾಜ್ಯವನ್ನು ಸಂಗ್ರಹಣೆ ಮಾಡದೆ ತುಂಗಾ ನದಿಯ
ತೀರದಲ್ಲಿ ಹಾಗೆಯೇ ಉಳಿಸಲಾಗಿತ್ತು. ಜನವರಿ 5 ರಂದು ಕುರುವಳ್ಳಿಯ 9 ವರ್ಷದ ಬಾಲಕ ತನ್ನ ಮೂವರು
ಸ್ನೇಹಿತರೊಂದಿಗೆ ನದಿ ತೀರದಲ್ಲಿ ಆಟವಾಡುವಾಗ ಪಟಾಕಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಈ
ಸಂದರ್ಭದಲ್ಲಿ ಏಕಾಏಕಿ ಪಟಾಕಿ ಸಿಡಿದಿದ್ದು ಬಾಲಕನಿಗೆ ತೀವ್ರ ಗಾಯಗಳನ್ನು ತಂದೊಡ್ಡಿದೆ.
ಗಾಯಾಳುವನ್ನು ಪಟ್ಟಣದ ಜೆ.ಸಿ.
ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ
ದಾಖಲಿಸಲಾಗಿದೆ. ಬಾಲಕನ ಮೈ,ಕೈ, ಮುಖ ಸುಟ್ಟು ಹೋಗಿದ್ದು ತೀವ್ರ ತರಹದ ಗಾಯಗಳಾಗಿರುವುದು
ತಡವಾಗಿ ಬೆಳಕಿಗೆ ಬಂದಿದೆ.
