ಈ ಬಾರಿ ತೀರ್ಥಹಳ್ಳಿಯಲ್ಲಿ ಹಳೆಯ "ಸ್ಟಾಕ್" ಪಟಾಕಿ ಸಂಭ್ರಮ
ರಾಜಕೀಯ ಕಾರ್ಯಕ್ರಮದ ಉಳಿತಾಯದ ಪಟಾಕಿ ಸಿಡಿತ
ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ತೆಪ್ಪೋತ್ಸವಕ್ಕಾಗಿ ಸುಮಾರು 6 ಲಕ್ಷ ವೆಚ್ಚದ ಪಟಾಕಿ ಸಿಡಿತಕ್ಕೆ ಪ್ಲಾನ್ ಮಾಡಲಾಗಿದೆ. ಕಳೆದ ವರ್ಷ 5 ಲಕ್ಷ ಪಟಾಕಿ ಸಿಡಿಸಿದ್ದು ಈ ವರ್ಷ ಪೈಪೋಟಿಯ ರೂಪದಲ್ಲಿ ಒಂದು ಲಕ್ಷ ಹೆಚ್ಚುವರಿ ಪಟಾಕಿ ಸಿಡಿಸಲು ಸಿದ್ಧತೆ ಮಾಡಲಾಗಿದೆ.
ವಿಶೇಷವಾಗಿ ಶಿವಕಾಶಿಯ ತಂಡದಿಂದ ಸಿಡಿತಗೊಳ್ಳುತ್ತಿದ್ದ ಈ ಪಟಾಕಿ ಸಂಭ್ರಮಕ್ಕೆ ಕೋಕ್ ಬಿದ್ದಿದ್ದು ಪೂರ್ಣ ಪ್ರಮಾಣದಲ್ಲಿ ಸಿಡಿತಗೊಳ್ಳುತ್ತದೆಯೋ ಎಂಬ ಅನುಮಾನ ಸೃಷ್ಟಿಯಾಗುತ್ತಿದೆ. ಈಗಾಗಲೇ ತಲಾ 2 ಲಕ್ಷ ವೆಚ್ಚದಲ್ಲಿ ಮೂರು ತಂಡಗಳಿಗೆ ಪಟಾಕಿ ಸಿಡಿಸಲು ಅನುಮತಿಸಲಾಗಿದೆ. ಎರಡು ತಂಡಗಳು ಶಿವಕಾಶಿಯನ್ನು ಪ್ರತಿನಿಧಿಸುತ್ತಿದ್ದು ಮತ್ತೊಂದು ತಂಡ ತೀರ್ಥಹಳ್ಳಿಯದ್ದೇ ಇರಲಿದೆ. ಈ ತಂಡಕ್ಕೆ ನೀಡುವ ಪಟಾಕಿ ಹಿಂದಿನ ರಾಜಕೀಯ ಸಭೆ, ಸಮಾರಂಭದ ಲೆಕ್ಕಾಚಾರ ಸರಿಪಡಿಸಲು ಆದ್ಯತೆಯ ಆದಾರದಲ್ಲಿ ನೀಡಲಾಗುತ್ತಿದೆ.
ಒಂದು ಮಾಹಿತಿಯ ಪ್ರಕಾರ ರಾಜಕೀಯ ಮುಖಂಡರೊಬ್ಬರು ಸಭೆಗಾಗಿ ತರಿಸಿದ್ದ ಪಟಾಕಿ ಲೆಕ್ಕಾಚಾರವನ್ನು ಈಗ ಎಳ್ಳಮಾವಾಸ್ಯೆ ಜಾತ್ರೆಯ ನೆಪದಲ್ಲಿ ಮನ್ನಾ ಮಾಡುವ ಯೋಜನೆ ಇದಾಗಿದೆ. ಶಿವಕಾಶಿಯ ಸಂಭ್ರಮದ ಭ್ರಮೆಯ ಜೊತೆ ಜೊತೆಗೆ ತೀರ್ಥಹಳ್ಳಿ ತಂಡದ ಟುಸ್ ಪಟಾಕಿ ಸಂಭ್ರಮಕ್ಕೆ ತೆರೆ ಬಿದ್ದಿದೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬಂದಿದೆ.

%20(14).jpeg)
%20(13).jpeg)