ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕೊಪ್ಪ ವಾಸಿ ಶ್ರೀನಿವಾಸ ನಾಯ್ಕ (92) ವಯೋಸಹಜವಾಗಿ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಮೂಲತಃ ಕುಡುಮಲ್ಲಿಗೆ ಸಮೀಪದ ಕೊಡಿಗೆಯವರಾದ ಶ್ರೀನಿವಾಸ ನಾಯ್ಕ ತಮ್ಮ ಸೌಮ್ಯ ಸ್ವಭಾವದಿಂದ ಗುರುತಿಸಿಕೊಂಡಿದ್ದರು. ಅವರು ಪತ್ನಿ ಸೇರಿದಂತೆ ಪುತ್ರರಾದ ಬೆಂಗಳೂರು ಬಿಬಿಎಂಪಿ ಉದ್ಯೋಗಿ ಉಮೇಶ್, ರಮೇಶ್, ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೇಲಿನಕೊಪ್ಪ ಮಹೇಶ್, ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮೇಲಿಕೊಪ್ಪ ಹರೀಶ್ ಸೇರಿದಂತೆ ಕುಟುಂಬವನ್ನು ಅಗಲಿದ್ದಾರೆ. ಅಂತ್ಯಕ್ರೀಯೆ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
