30 ಸಾವಿರ ಕುಟುಂಬಕ್ಕೆ ಗೃಹಲಕ್ಷ್ಮೀ ಹಣ ತಲುಪುತ್ತಿದೆ -ಶಚೀಂದ್ರ ಹೆಗ್ಡೆ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 30,800 ಮಹಿಳೆಯರಿಗೆ 6ಕೋಟಿ 16ಲಕ್ಷ, ಅನ್ನಭಾಗ್ಯ ಯೋಜನೆಯಡಿ 29ಸಾವಿರ ಕುಟುಂಬಕ್ಕೆ 1ಕೋಟಿ 56ಲಕ್ಷ, ಗೃಹಜೋತಿ ಯೋಜನೆಯಡಿ 34 ಸಾವಿರ ಸ್ಥಾವರಕ್ಕೆ 1ಕೋಟಿ 60ಲಕ್ಷ, ಯುವನಿಧಿ ಯೋಜನೆಯಡಿ 514ಜನರಿಗೆ 14ಲಕ್ಷ ಹೀಗೆ ತಾಲ್ಲೂಕಿಗೆ ತಿಂಗಳಿಗೆ 10ಕೋಟಿಗೂ ಹೆಚ್ಚಿನ ಹಣ ಬರುತ್ತಿದೆ, ಶಕ್ತಿ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡಲು ಕೆಎಸ್ಆರ್ಟಿಸಿ ಡಿಪೋ ಮಂಜೂರು ಮಾಡಿಸಲು ಪ್ರಯತ್ನಮಾಡೋಣ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಪ್ರಧಿಕಾರದ ವತಿಯಿಂದ ಬೆಜ್ಜವಳ್ಳಿ, ಕೋಣಂದೂರು, ಹೊಸಳ್ಳಿ ಹಾಗೂ ಬಸವಾನಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ನಾಬಳಾ ಶಚಿಂದ್ರ ಹೆಗ್ಡೆ ನೇತೃತ್ವದಲ್ಲಿ ನೆಡೆಯಿತು.
ಜಿಲ್ಲಾ ಸಮಿತಿ ಸದಸ್ಯರಾದ ಬಿ.ಕೆ. ಉದಯ ಕುಮಾರ್, ಸದಸ್ಯರಾದ ರಾಘವೇಂದ್ರ ಶೆಟ್ಟಿ, ಹುಂಚದಕಟ್ಟೆ ಆದರ್ಶ, ಅಶ್ವಲ್ ಗೌಡ, ನಾಗೇಶ್ ನಾಯ್ಕ್, ಕಬಸೆ ವಿಕ್ರಂ, ಚಿಪ್ಪಿನಕೋಡಿಗೆ ವೆಂಕಟೇಶ್, ದಿಲೀಪ್, ಸೈಯದ್ ಯಾಸೀನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್ ಶೈಲಾ ಇದ್ದರು.

