ಲಕ್ಷ್ಮೀ ಗ್ರೂಪ್ ಮಾಲೀಕ ಎಸ್.ನರಸಿಂಹಮೂರ್ತಿ (75) ಸೋಮವಾರ ಬೆಳಿಗ್ಗೆ ತೀವ್ರ ಅನಾರೋಗ್ಯದಿಂದ ನಿಧನರಾದರು. ಭಾನುವಾರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀರ್ಥಹಳ್ಳಿ ಪಟ್ಟಣದ ಕೆ.ಸಿ.ರಸ್ತೆಯ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಕ್ಷೀ ವೈನ್ಸ್, ಬಾಲಾಜಿ ವೈನ್ಸ್, ದುರ್ಗಾಂಬ ವೈನ್ಸ್ ಮಾಲೀಕರಾಗಿದ್ದಾರೆ. ಅವರು ಪತ್ನಿ, ಪುತ್ರರಾದ ಸಪ್ತಸಿರಿ ಚಿಟ್ ಫಂಡ್ಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಸಂಚಾಲಕ ರವಿ, ಸಹ್ಯಾದ್ರಿ ಮೆಡಿಕಲ್ಸ್ ಮಾಲೀಕ ನಿರಂಜನ ಅವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸಂಜೆ ಪಟ್ಟಣದಲ್ಲಿ ನಡೆಯಲಿದೆ.
.jpeg)