ನವೆಂಬರ್ 23ರ ಶನಿವಾರ ಯಾದಗಿರಿಯಲ್ಲಿ ಡಿಎಸ್ಎಸ್ ರಾಜ್ಯ ಸಮಿತಿ
ಸಭೆ - ಕೆ ವಿ ನಾಗರಾಜ್
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಲಕ್ಷ್ಮೀನಾರಾಯಣ ನಾಗವಾರ ಬಣದ ರಾಜ್ಯ ಸಮಿತಿ ಸಭೆಯನ್ನು ನವೆಂಬರ್ 23ರ ಶನಿವಾರ ಬೆಳ್ಳಿಗೆ 11 ಗಂಟೆಗೆ ಯಾದಗಿರಿ ಜಿಲ್ಲೆಯ ಯಾದಗಿರಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಕರೆಯಲಾಗಿದೆ ಎಂದು ರಾಜ್ಯ ಸಂಘಟನಾ ಸಂಚಾಲಕರಾದ ಕೆಂಪಣ್ಣ ಸಾಗ್ಯ ತಿಳಿಸಿದ್ದಾರೆ.ಈ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂಘಟನಾ ಸಂಚಾಲಕರಾದ ಶ್ಯಾಮ್ ಘಾಟಿಗೆ ಯವರು ವಹಿಸಿಕೊಳ್ಳಲಿದ್ದು ಈ ಸಭೆಗೆ ರಾಜ್ಯ ಸಂಘಟನಾ ಸಂಚಾಲಕರಾದ ಎಫ್ ವೈ ದೊಡ್ಡಮನಿ, ರಾಜ್ಯ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಶೋಭಾಕಟ್ಟಿಮನಿ, ಸಂಘಟನಾ ಸಂಚಾಲಕಿಯಾರಾದ ಗೌರಮ್ಮ ದೊಡ್ಡಮನಿ, ಪುಷ್ಪ ಬಳ್ಳಾರಿ, ರಾಜ್ಯ ಸಮಿತಿ ಸದಸ್ಯರಾದ ಪ್ರಭು ಮೇಗಲಮನಿ ರಾಯಚೂರ್, ಆನೇಕಲ್ ವೆಂಕಟೇಶ್ ಮೂರ್ತಿ ಕುಮಾರ್ ರಾಮನಗರ ಪ್ರಕಾಶ್ ಕೇಲ್ಲೂರ್ ಗದಗ ಚಂದ್ರಕಾಂತ್ ಸಿಂಘೆ ವಿಜಯಪುರ ಬಸವರಾಜ್ ಬಾಡಿ ಹಾಳ್ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಸಂಚಾಲಕರು ಸಂಘಟನಾ ಸಂಚಾಲಕರು ಜಿಲ್ಲಾ ಸಮಿತಿ ಸದಸ್ಯರು ಮುಂತಾದವರು ಭಾಗವಹಿಸಲಿದ್ದು ಮದ್ಯಾಹ್ನ 3 ಗಂಟೆಗೆ ಕಲಬುರ್ಗಿ ವಿಭಾಗಿಯ ಸಂಚಾಲಕರಾದ ಚಂದ್ರುಚಕ್ರವರ್ತಿ ಅಧ್ಯಕ್ಸತೆ ಯಲ್ಲಿ ಜಿಲ್ಲಾ ಸಮಿತಿ ರಚನೆ ಮಾಡಲಾಗುಹುದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಾಗವಾರ ಬಣದ ಹೆಸರು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಲ್ಲಿ ಹಣ ವಸೂಲು ಮಾಡುತ್ತಿದ್ದಾರೆ ಎಂಬ ದೂರುಗಳು ರಾಜ್ಯ ಸಮಿತಿಗೆ ಬಂದಿದ್ದು ನಾಗವಾರ ಹೆಸರಿಗೆ ಕಪ್ಪು ಚುಕ್ಕೆ ತರುತ್ತಿರುವ ಬಗ್ಗೆ ನಿರ್ದಾಕ್ಸಣ್ಯ ಕ್ರಮ ಕೈಗೊಂಡು ಆಯಾ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಕೂಡ ಮಾಡಲಾಗುವುದು ಎಂದು ತಿಳಿಸಿರುತ್ತಾರೆ.
ಈ ಸಭೆಗೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳು ತಪ್ಪದೆ ಹಾಜರಾಗಿ ತಮ್ಮ ಸಲಹೆ ಯನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಕೆ.ವಿ. ನಾಗರಾಜ್ ಅರಳಸುರಳಿ ಮನವಿ ಮಾಡಿದ್ದಾರೆ.