ಬೈಕ್ ಓಡಿಸುವಾಗ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಹೊದಲ-ಅರಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲ್ಲಿಸರ- ಒಡ್ಡಿನಬೈಲು ಮುಖ್ಯರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ. ಮೃತ ಯುವಕನನ್ನು ರಂಜದಕಟ್ಟೆ ನಿವಾಸಿ ಸಂತೋಷ್ (32) ಎಂದು ಗುರುತಿಸಲಾಗಿದೆ.
ಹೊಸಗದ್ದೆಯ ಮಾವನ ಮನೆಗೆ ಹೋಗಿ ಹಿಂದಿರುಗುವಾಗ ಹೊದಲ ವೃತ್ತದ ಸಮೀಪದ ಹೊಟೇಲ್ ಗೆ ತೆರಳಿ ಎದೆನೋವು ಎಂದಿದ್ದಾರೆ. ಸ್ಥಳೀಯರು ಬೈಕ್ ಚಲಾಯಿಸುವುದು ಬೇಡ, ಆಸ್ಪತ್ರೆಗೆ ಹೋಗೋಣ ಎಂದು ತಿಳಿ ಹೇಳಿದ್ದಾರೆ. ಆದರೆ ಯಾರ ಮಾತು ಕೇಳದೆ ಬೈಕ್ ಚಲಾಯಿಸಿಕೊಂಡು ಸ್ಥಳದಿಂದ ಹೊರಟಿದ್ದಾರೆ. ಮಾರ್ಗ ಮಧ್ಯೆ ತೀವ್ರ ಎದೆನೋವು ಕಾಣಿಸಿಕೊಂಡು ಬೈಕ್ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.