ಡಿಜೆ ಸದ್ದಿಗೆ ಹೆಜ್ಜೆ
ಹಾಕಿದ ವ್ಯಕ್ತಿ ಸಾವು
ತೀರ್ಥಹಳ್ಳಿ ಪಟ್ಟಣದಲ್ಲಿ
ಗುಬ್ಬಚ್ಚಿ, ಡ್ರೋನ್, ಕ್ಯಾಮೆರಕ್ಕೆ ಹಾನಿ
ತೀರ್ಥಹಳ್ಳಿಯಲ್ಲಿ
ನಡೆದ ವಿವಿಧ ಗಣೇಶೋತ್ಸವ ಮೆರವಣಿಗೆಯಲ್ಲಿ ಭಾರಿ ಪ್ರಮಾಣದ ಡೆಸಿಬಲ್ ಹೊಂದಿರುವ ಡಿಜೆ ಬಳಕೆಯಾಗಿದೆ.
ಡಿಜೆಗೆ ತಕ್ಕಂತೆ ಯುವಕರನ್ನು ರಂಜಿಸುವ ಉದ್ದೇಶದಿಂದ ಲೇಸರ್ ಲೈಟ್, ವಿವಿಧ ರೀತಿಯ ಬೆಳಕುಗಳನ್ನು
ಬಳಕೆ ಮಾಡಲಾಗಿದ್ದು ಹಾನಿಯ ಲೆಕ್ಕ ಅಂದಾಜಿಸಲು ಸಾಧ್ಯವಾಗಿಲ್ಲ.
ಬೇಗುವಳ್ಳಿಯಲ್ಲಿ
ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಬಿದರಹಳ್ಳಿ ಗ್ರಾಮದ
66 ವರ್ಷದ ಇ.ಎಸ್. ಶ್ಯಾಮಣ್ಣ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ವಿಪರೀತ ಪ್ರಮಾಣದಲ್ಲಿ ಬಳಕೆಯಾದ ಡಿಜೆ ಶಬ್ದದಿಂದಲೇ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಸಂಶಯ
ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ಪಟ್ಟಣದಲ್ಲಿ
ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ವಿಪರೀತ ಪ್ರಮಾಣದ ಧ್ವನಿ ಮತ್ತು ಲೇಸರ್ ಬಳಕೆ ಮಾಡಿದ್ದು
ಡ್ರೋಣ್, ಡಿಎಸ್ಎಲ್ಆರ್ ಕ್ಯಾಮೆರಾ, 150ಕ್ಕೂ ಹೆಚ್ಚು ಮೊಬೈಲ್ ಕ್ಯಾಮೆರಾ ಲೆನ್ಸ್, ಡಿಸ್ಪ್ಲೇ,
ಆಜಾದ್ ರಸ್ತೆಯ ಡಿವೈಡರ್ ಮೇಲಿನ ಮರದಲ್ಲಿ ವಾಸವಾಗಿದ್ದ ಗುಬ್ಬಚ್ಚಿ, ಸಣ್ಣ ಪಕ್ಷಿಗಳು ಹೃದಯಾಘಾತಕ್ಕೆ
ಒಳಗಾಗಿ ಮೃತಪಟ್ಟಿವೆ. ಕೆಲವು ಪಕ್ಷಿಗಳು ಹಾರಿ ಹೋಗಿವೆ. ಕೆಲವು ಅಂಗಡಿ ಮಳಿಗೆಗಳ ವಸ್ತುಗಳು ಅಲ್ಲಾಡಿವೆ.
ಔಷಧಿ ಮಳಿಗೆಗಳಲ್ಲಿ ಕೂಡಿದ್ದ ಗಾಜಿನ ಬಾಟಿಲಿ, ಅಂಗಡಿಗಳಲ್ಲಿ ಸಂಗ್ರಹಿಸಿದ್ದ ವಿವಿಧ ರೀತಿಯ ವಸ್ತುಗಳು
ಕೆಳಗೆ ಬಿದ್ದು ಹಾಳಾಗಿವೆ. ತೀರ್ಥಹಳ್ಳಿ ಪಟ್ಟಣದಲ್ಲಿ ವಾಸಿಸುವ ಅನೇಕರ ಮನೆಯ ಒಳಗೆ ಅಲುಗಾಡಿದಂತೆ
ಆಗಿದ್ದು ಹಲವರಿಗೆ ಭೂಕಂಪದ ವಾತಾವಣರ ಸೃಷ್ಟಿಯಾಗಿತ್ತು.